ಜೂಜಾಟ: 6 ಮಂದಿಯ ಬಂಧನ

Update: 2018-09-03 18:09 GMT

ಬೆಂಗಳೂರು, ಸೆ.3: ಹಣವನ್ನು ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದ ಆರೋಪದಡಿ ಆರು ಜನರನ್ನು ಬಂಧಿಸಿ, 1.26 ಲಕ್ಷ ರೂ. ವಶಕ್ಕೆ ಪಡೆಯುವಲ್ಲಿ ಇಲ್ಲಿನ ಅನ್ನಪೂರ್ಣೆಶ್ವರಿನಗರ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.

ನಗರದ ಮಂಜುನಾಥ, ದೀಪಕ್, ಶ್ರೀನಿವಾಸ್, ಸೀನಪ್ಪ, ಮೋಹನ ಹಾಗೂ ಮುರುಳಿ ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.

ಮಾರಮ್ಮ ಪಾರ್ಕ್ ಎದುರು ಮನೆಯೊಂದರಲ್ಲಿ ಆರು ಜನ ಹಣ ಪಣವಾಗಿ ಕಟ್ಟಿಕೊಂಡು ಜೂಜಾಟ ಆಡುತ್ತಿದ್ದಾರೆಂಬ ಮಾಹಿತಿ ಸಂಗ್ರಹಿಸಿ ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಇವರಿಂದ 1.26 ಲಕ್ಷ ರೂ. ನಗದು ವಶಕ್ಕೆ ಪಡೆದು ಇಲ್ಲಿನ ಅನ್ನಪೂರ್ಣೆಶ್ವರಿ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News