ಕಳ್ಳನೆಂಬ ಶಂಕೆಯಲ್ಲಿ ಬಾಲಕನ ಥಳಿಸಿ ಹತ್ಯೆ
Update: 2018-09-04 09:32 GMT
ಹೊಸದಿಲ್ಲಿ, ಸೆ.4: ಕಳ್ಳ ಎಂಬ ಶಂಕೆಯಲ್ಲಿ 16 ವರ್ಷದ ಬಾಲಕನನ್ನು ಥಳಿಸಿ ಹತ್ಯೆಗೈದಿರುವ ಘಟನೆ ದಿಲ್ಲಿಯ ಮುಕುಂದ್ ಪುರ್ ಏರಿಯಾದಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಬಾಲಕನ ಮನೆ ಸಮೀಪವೇ ಮೃತದೇಹ ಪತ್ತೆಯಾಗಿದ್ದು, ಸ್ಥಳೀಯರ ಗುಂಪು ಥಳಿಸಿ ಹತ್ಯೆಗೈದಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದೆ. ನೆರೆಮನೆಯೊಂದಕ್ಕೆ ಬಾಲಕ ನುಗ್ಗಲು ಯತ್ನಿಸಿದ್ದಾಗ ಆತ ಸಿಕ್ಕಿಬಿದ್ದಿದ್ದ ಎನ್ನಲಾಗಿದೆ.
ಈ ಬಗ್ಗೆ ಭಲಸ್ವಾ ಡೈರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.