ಕೆಎಸ್ಐಸಿಜೆ ಅಧ್ಯಕ್ಷರಾಗಿ ನಿವೃತ್ತ ನ್ಯಾ.ಎನ್.ಕುಮಾರ್ ಆಯ್ಕೆ
Update: 2018-09-05 17:43 GMT
ಬೆಂಗಳೂರು, ಸೆ.5: ಇಂಟರ್ ನ್ಯಾಷನಲ್ ಕಮಿಷನ್ ಆಫ್ ಜ್ಯೂರಿಸ್ಟ್ಸ್ ಕರ್ನಾಟಕ ಘಟಕದ (ಕೆಎಸ್ಐಸಿಜೆ) ಅಧ್ಯಕ್ಷರಾಗಿ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎನ್.ಕುಮಾರ್ ಆಯ್ಕೆಯಾಗಿದ್ದಾರೆ.
ಪದಾಧಿಕಾರಿಗಳಾಗಿ ಹಿರಿಯ ವಕೀಲರಾದ ಬಿ.ವಿ.ಆಚಾರ್ಯ, ಎಂ.ಆರ್.ನಾಯಕ್, ಕೆ.ಕಸ್ತೂರಿ, ಡಿ.ಎಲ್.ಎನ್.ರಾವ್, ಎಸ್.ಎಸ್.ನಾಗಾನಂದ ಹಾಗೂ ಡಿ.ಎನ್. ನಂಜುಂಡರೆಡ್ಡಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಕಾರ್ಯದರ್ಶಿ ಡಿ.ಸೂರ್ಯನಾರಾಯಣ ತಿಳಿಸಿದ್ದಾರೆ.
ಆಯೋಗವು ಮಾನವ ಹಕ್ಕುಗಳ ರಕ್ಷಣೆ, ಏಳಿಗೆ ಹಾಗೂ ಕಾನೂನಿನ ನಿಯಮಗಳನ್ನು ಅರ್ಥೈಸುವ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿದೆ.