ಜಗದೀಶ ಪೂಜಾರಿ

Update: 2018-09-12 16:46 GMT

ಬಂಟ್ವಾಳ, ಸೆ. 12: ತಾಲೂಕಿನ ರಾಯಿ ಸಮೀಪದ ಪೂಜಾರ್ತೋಡಿ ನಿವಾಸಿ, ರಿಕ್ಷಾ ಚಾಲಕ ಜಗದೀಶ ಪೂಜಾರಿ(45) ಇವರು ಹೃದಯಾಘಾತದಿಂದ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಬುಧವಾರ ಸಂಜೆ ನಿಧನರಾದರು.

ಇವರು ಕೈತ್ರೋಡಿ ಕ್ವಾರ್ಟರ್ಸ್ ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ, ಬದನಡಿ ಷಣ್ಮುಖ ಕಲಾ ತಂಡದ ಸಕ್ರಿಯ ಸದಸ್ಯರಾಗಿದ್ದರು. ಮೃತರು ತಾಯಿ, ಪತ್ನಿ, ಪುತ್ರನನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಗುರುವಾರ ಬೆಳಗ್ಗೆ ಮನೆ ಸಮೀಪ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ