ಹಲ್ಲೆ ಆರೋಪ: ಸ್ವಾಮೀಜಿ ವಿರುದ್ಧ ಎಫ್ಐಆರ್

Update: 2018-09-13 08:35 GMT

ಬೆಂಗಳೂರು, ಸೆ.13: ಹಲ್ಲೆ ಆರೋಪದಲ್ಲಿ ಕೆಂಗೇರಿಯ ಬಂಡೇಮಠದ ಸಚ್ಚಿದಾನಂದ ಸ್ಚಾಮೀಜಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ನಗರದ ಕೆಂಗೇರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಅನುಭವ ಮಂಟಪದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಮೇಲೆ ಸ್ವಾಮೀಜಿ ಮತ್ತವರ ಕಡೆಯಿಂದ ಹಲ್ಲೆ ಆರೋಪ ಕೇಳಿಬಂದಿದೆ.

ಮಠದಲ್ಲಿ ನಡೆಯುತ್ತಿದ್ದ ಬಸವೇಶ್ವರ ಜಯಂತಿಯನ್ನು ಆಚರಣೆಗೆ ಅಡ್ಡಿಪಡಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದ್ದು, ಈ ಸಂಬಂಧ ತನಿಖೆ ನಡೆಸಲು ದೂರುದಾರರು ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News