​ಅಬ್ದುಲ್ ಬಶೀರ್ ಕುದ್ರೋಳಿ

Update: 2018-09-14 17:24 GMT

ಮಂಗಳೂರು, ಸೆ.14: ನಗರದ ಕುದ್ರೋಳಿ ನಿವಾಸಿ, ಮಾಂಸದ ವ್ಯಾಪಾರಸ್ಥರಾದ ಅಬ್ದುಲ್ ಬಶೀರ್ ಕುದ್ರೋಳಿ (58) ಶುಕ್ರವಾರ ಸಂಜೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.

ಮೃತರು ಪತ್ನಿ, ನಾಲ್ವರು ಪುತ್ರರು ಮತ್ತು ನಾಲ್ವರು ಪುತ್ರಿಯರು ಹಾಗೂ ಅಪಾರ ಬಂಧು-ಬಳಗ ಅಗಲಿದ್ದಾರೆ. ಜಂಇಯ್ಯತುಸ್ಸಾದಾ ಮಾಂಸ ವ್ಯಾಪಾರಸ್ಥರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದ ಇವರು ಸಂಘದ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು.

ವಧಾಗೃಹ ಬಂದ್: ಮೃತರ ಗೌರವಾರ್ಥ ಶನಿವಾರ ಕುದ್ರೋಳಿಯ ವಧಾಗೃಹ ಬಂದ್ ಮಾಡಲಾಗುವುದು ಎಂದು ಸಂಘದ ಅಧ್ಯಕ್ಷ ಅಲಿ ಹಸನ್, ಯಾಸೀನ್ ಕುದ್ರೋಳಿ, ಗುತ್ತಿಗೆದಾರ ಜೆ. ಅಬ್ದುಲ್ ಖಾದರ್ ತಿಳಿಸಿದ್ದಾರೆ.

ಸಂತಾಪ: ಅಬ್ದುಲ್ ಬಶೀರ್ ರ ನಿಧನಕ್ಕೆ ಮಾಂಸ ವ್ಯಾಪಾರಸ್ಥರ ಸಂಘವು ತೀವ್ರ ಸಂತಾಪ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ