ಕೆ.ಬಿ.ರವಿರಾಜ್ ರೈ

Update: 2018-09-15 12:50 GMT

ಚಿಕ್ಕಮಗಳೂರು, ಸೆ.15: ಲಯನ್ಸ್ ಅಧ್ಯಕ್ಷ ಕೆ.ಬಿ.ರವಿರಾಜ್ ರೈ ಬೆಳ್ತಂಗಡಿಯ ತಮ್ಮ ತೋಟದ ಮನೆಯಲ್ಲಿ ಶನಿವಾರ ಬೆಳಿಗ್ಗೆ 5 ಗಂಟೆಗೆ ಹೃದಯಾಘಾತದಿಂದ ನಿಧನರಾದರು.

ಮರದ ವ್ಯಾಪಾರಿಯಾಗಿದ್ದ ಅವರು ಕಳೆದ 2 ತಿಂಗಳಿನಿಂದ ಲಯನ್ಸ್ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಸರಳ ಸಜ್ಜನಿಕೆಗೆ ಹೆಸರಾಗಿದ್ದ ರೈ ಅವರಿಗೆ 48 ವರ್ಷವಾಗಿತ್ತು. ತಾಯಿ, ಪತ್ನಿ ಇಬ್ಬರು ಪುತ್ರಿಯರು, ಒರ್ವ ಪುತ್ರ ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ನಗರದ ಲಯನ್ಸ್ ಸೇವಾ ಭವನದಲ್ಲಿ ಲಯನ್ಸ್ ಸೇವಾ ಪ್ರತಿಷ್ಠಾನ ಮತ್ತು ಲಯನ್ಸ್ ವತಿಯಿಂದ ಶ್ರದ್ದಾಂಜಲಿ ಸಭೆ ನಡೆಯಿತು. ಬೆಳ್ತಂಗಡಿಯ ತೋಟದಲ್ಲಿ ರೈ ಅವರ ಪಾರ್ಥೀವ ಶರೀರದ ಅಂತ್ಯಕ್ರಿಯೆ ಸಂಜೆ ಜರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ