ಕೆಸಿಎಫ್ ಒಮಾನ್: ಗಲ್ಫ್ ಇಶಾರ ಅಭಿಯಾನ

Update: 2018-09-17 12:42 GMT

ಒಮಾನ್,ಸೆ.17: ಕರ್ಣಾಟಕ ಕಲ್ಚರಲ್ ಫೌಂಡೇಶನ್ ಒಮಾನ್ ರಾಷ್ಟ್ರೀಯ ಸಮಿತಿ ವತಿಯಿಂದ ಗಲ್ಫ್ ಇಶಾರ ಚಂದಾ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಮಾಝಿನ್(ರ)ಸನ್ನಿದಿಯಲ್ಲಿ ಅಧಿಕೃತವಾಗಿ ಕೆಸಿಎಫ್ ಒಮಾನ್ ರಾಷ್ಟ್ರೀಯಧ್ಯಕ್ಷ ಸಯ್ಯಿದ್ ಆಬಿದ್ ಅಲ್ ಹೈದ್ರೋಸಿ ತಂಙಳ್ ರವರು ಕೆಸಿಎಫ್ ಐಎನ್ಸಿ ನೇತಾರ ಇಕ್ಬಾಲ್ ಬೊಲ್ಮಾರ್ ರವರನ್ನು ಪ್ರಥಮ ಚಂದಾದಾರರನ್ನಾಗಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಗಲ್ಫ್ ಇಶಾರ ಚಂದಾ ಅಭಿಯಾನವು ಸಪ್ಟೆಂಬರ್ 15 ರಿಂದ ಅಕ್ಟೋಬರ್ 15ರ ವರೆಗೆ ಒಮಾನಿನದ್ಯಾಂತ ನಡೆಯಲಿದೆ .

ಈ ಕಾರ್ಯಕ್ರಮದಲ್ಲಿ ಸಂಘಟನಾದ್ಯಕ್ಷ ಹಂಝ ಕನ್ನಂಗಾರ್, ಕೆಸಿಎಫ್ ಒಮಾನ್ ಇಹ್ಸಾನ್ ಕನ್ವೀನರ್ ಝುಬೈರ್ ಸಅದಿ ಪಾಟ್ರಕೋಡಿ, ಪ್ರದಾನ ಕಾರ್ಯದರ್ಶಿ ಹನೀಫ್ ಸಅದಿ, ರಾಷ್ಟ್ರೀಯ ಸಮಿತಿ ಸದಸ್ಯರಾದ ಸಾದಿಕ್ ಸುಳ್ಯ, ಗಫ್ಫಾರ್ ನಾವುಂದ, ಶಮೀರ್ ಉಸ್ತಾದ್ ಹೂಡೆ, ಅಕ್ಬರ್ ಉಪ್ಪಳ್ಳಿ, ಆರಿಫ್ ಕೋಡಿ, ಅಯ್ಯೂಬ್ ಕೋಡಿ, ಕಲಂದರ್ ಬಾವ, ಶಾಕಿರ್ ಮೌಲಾನ, ಇಕ್ಬಾಲ್ ಎರ್ಮಾಳ್, ಶಫೀಕ್ ಮಾರ್ನಬೈಲು, ಕಾಸಿಂ ಪೊಯ್ಯತ್ತಬೈಲು ಹಾಗೂ ಝೋನ್, ಸೆಕ್ಟರ್ ಸದಸ್ಯರುಗಳು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News