ಸೆ.19ರಿಂದ ಅಂತರ್‌ರಾಷ್ಟ್ರೀಯ ಸಮ್ಮೇಳನ

Update: 2018-09-18 16:16 GMT

ಬೆಂಗಳೂರು, ಸೆ. 18: ವಸತಿ ಹಾಗೂ ಮೂಲಸೌಕರ್ಯ ಸವಾಲುಗಳ ಕುರಿತ ಅಂತರ್‌ರಾಷ್ಟ್ರೀಯ ಸಮ್ಮೇಳನವು ಸೆ.19ರಿಂದ ನಾಲ್ಕು ದಿನಗಳವರೆಗೆ ನಿಮ್ಹಾನ್ಸ್ ಸಭಾಂಗಣದಲ್ಲಿ ಇಂಡಿಯನ್ ಕಾಂಕ್ರೀಟ್ ಇನ್‌ಸ್ಟಿಟ್ಯೂಟ್ ವತಿಯಿಂದ ಆಯೋಜಿಸಲಾಗಿದೆ.

ಈ ಕುರಿತು ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಐಸಿಐ ಕಾರ್ಯದರ್ಶಿ ಮಾತನಾಡಿ, ಕಾರ್ಯಕ್ರಮವನ್ನು ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯ ಉಪಕುಲಪತಿ ಡಾ.ಕರಿಸಿದ್ದಪ್ಪ ಉದ್ಘಾಟಿಸಲಿದ್ದು, ಐಸಿಐನ ಅಧ್ಯಕ್ಷ ವಿನಯ್ ಗುಪ್ತಾ, ಐಡಬ್ಲೂಸಿನ ಅಧ್ಯಕ್ಷ ಡಾ.ಅಶ್ವತ್ಥ್, ಉಪಾಧ್ಯಕ್ಷ ಎಂ.ರವಿಶಂಕರ್ ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ವೃತ್ತಿಪರ ಎಂಜಿನಿಯರ್‌ಗಳು, ತಯಾರಕರು, ಶಿಕ್ಷಣ ತಜ್ಞರು, ಸಲಹೆಗಾರರು ಮತ್ತು ಸಂಶೋಧಕರು ಪಾಲ್ಗೊಂಡು ಕಾಂಕ್ರೀಟ್ ಕ್ಷೇತ್ರದಲ್ಲಿ ಇರುವ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳಲಿದ್ದಾರೆ ಎಂದು ಹೇಳಿದರು.

ಹೆಚ್ಚಿನ ಮಾಹಿತಿಗಾಗಿ ಮೊಬೈಲ್ ಸಂಖ್ಯೆ: 9886127398 ಅನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News