ಬೆಂಗಳೂರು: ಸರಗಳ್ಳತನ ಆರೋಪಿಯ ಪತ್ನಿ ಸೆರೆ

Update: 2018-09-18 16:17 GMT

ಬೆಂಗಳೂರು, ಸೆ.18: ಸರಗಳ್ಳತನ ಪ್ರಕರಣದ ಆರೋಪಿ ಅಚ್ಯುತ್ ಕುಮಾರ್ ಪತ್ನಿಯನ್ನು ಇಲ್ಲಿನ ಕೆಂಗೇರಿ ಠಾಣಾ ಪೊಲೀಸರು ಬಂಧಿಸಿದ್ದಾರೆ.

ಮಹಾದೇವಿ ಬಂಧನಕ್ಕೊಳಗಾದ ಪತ್ನಿಯಾಗಿದ್ದು, ಐಷಾರಾಮಿ ಜೀವನಕ್ಕಾಗಿ ದಿನಕ್ಕೆ ಕನಿಷ್ಠ ನಾಲ್ಕೈದು ಸರ ಕಳ್ಳತನ ಮಾಡುವಂತೆ ಪತಿಗೆ ಒತ್ತಾಯ ಮಾಡುತ್ತಿದ್ದ ಮಾಹಿತಿ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎನ್ನಲಾಗಿದೆ.

ಅಚ್ಯುತ್ ಕುಮಾರ್ ಎರಡನೆ ಪತ್ನಿ ಮಹಾದೇವಿಯ ಮಾತು ಕೇಳಿ 3 ತಿಂಗಳಲ್ಲಿ ಒಂದು ಕೋಟಿ ಮೌಲ್ಯದ ಚಿನ್ನದ ಸರ ಕಳ್ಳತನ ಮಾಡಿದ್ದ, ಒಂದು ತಿಂಗಳ ಹಿಂದೆಯಷ್ಟೇ ಆರೋಪಿ ಅಚ್ಯುತ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದರು. ಬಂಧನದ ಬಳಿಕ ಪತ್ನಿ ಮಹಾದೇವಿ ಪರಾರಿಯಾಗಿ ಅನಾಥಾಶ್ರಮದಲ್ಲಿ ತಲೆ ಮರೆಸಿಕೊಂಡಿದ್ದಳು ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News