ಮುಖ್ಯಮಂತ್ರಿಯಿಂದ ಮೊಹರಂ ಸಂದೇಶ

Update: 2018-09-20 15:45 GMT

ಬೆಂಗಳೂರು, ಸೆ.20: ಇಸ್ಲಾಂ ಧರ್ಮದ ಮೊದಲ ಹಾಗೂ ಪವಿತ್ರ ಮಾಸವಾದ ಮೊಹರಂನ ಸಂದರ್ಭದಲ್ಲಿ ತ್ಯಾಗ, ನಾಯಕತ್ವ ಹಾಗೂ ಸರ್ವಾಧಿಕಾರದ ವಿರುದ್ಧ ದನಿ ಎತ್ತುವ ಗುಣವನ್ನು ನಾವೆಲ್ಲರೂ ಬೆಳೆಸಿಕೊಳ್ಳೋಣ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಮೊಹರಂ ಸಂದೇಶದಲ್ಲಿ ತಿಳಿಸಿದ್ದಾರೆ.

ಪ್ರವಾದಿ ಮುಹಮ್ಮದರ ಮೊಮ್ಮಗ ಹುಸೈನ್ ಅವರು ಖಿಲಾಫತ್‌ಅನ್ನು ಮರುಸ್ಥಾಪಿಸಲು ಜೀವದಾನ ಮಾಡಿದ ಹಾಗೂ ಪ್ರವಾದಿ ಮೂಸಾ ಅವರು ಈಜಿಪ್ಟ್ ದೊರೆಗಳ ದುರಾಡಳಿತದ ವಿರುದ್ಧ ಜಯ ಸಾಧಿಸಿದ ಈ ದಿನದಂದು ಅವರನ್ನು ಶ್ರದ್ಧೆಯಿಂದ ಸ್ಮರಿಸೋಣ ಎಂದು ಅವರು ತಮ್ಮ ಸಂದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News