ಸಿಎಂ ವಸುಂಧರಾ ರಾಜೆ ಎದುರಲ್ಲೇ ಹೊಡೆದಾಡಿಕೊಂಡ ಬಿಜೆಪಿ ನಾಯಕರು

Update: 2018-09-23 07:27 GMT

ಆಲ್ವಾರ್, ಸೆ.23: ಇಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆಯವರ ಎದುರಲ್ಲೇ ಇಬ್ಬರು ಬಿಜೆಪಿ ನಾಯಕರು ಹೊಡೆದಾಡಿಕೊಂಡ ಘಟನೆ ನಡೆದಿದೆ.

ಮುಂದಿನ ಚುನಾವಣೆಯ ಸಿದ್ಧತೆಯಲ್ಲಿರುವ ಬಿಜೆಪಿ ಈ ಘಟನೆ ತೀವ್ರ ಮುಜುಗರ ಉಂಟುಮಾಡಿದೆ.

ಬಿಜೆಪಿಯ ನಾಯಕರಾದ ರೋಹಿತಾಶ್ ಶರ್ಮಾ ಮತ್ತು ದೇವಿ ಸಿಂಗ್ ಶೇಖಾವತ್ ವೇದಿಕೆಯಲ್ಲಿ ಕೈಮಿಲಾಯಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮುಖ್ಯಮಂತ್ರಿ ವಸುಂಧರಾ ರಾಜೆಯವರು ಕೊನೆಗೆ ಮಧ್ಯ ಪ್ರವೇಶಿಸಿದ್ದು, ಇಬ್ಬರನ್ನು ಸಮಾಧಾನಪಡಿಸಿದ್ದಾರೆ. ರಾಜೆಯವರು ಭಾಷಣ ಮಾಡುತ್ತಿದ್ದ ವೇಳೆ ಇಬ್ಬರು ಹೊಡೆದಾಟ ನಡೆಸಿದ್ದಾರೆ ಎನ್ನಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News