ಅ.2ನೆ ವಾರದಲ್ಲಿ ಹಿಂಗಾರು ಪ್ರವೇಶ ಸಾಧ್ಯತೆ

Update: 2018-10-02 17:15 GMT

ಬೆಂಗಳೂರು, ಅ. 2: ರಾಜ್ಯದಲ್ಲಿ ನೈರುತ್ಯ ಮುಂಗಾರು ಕ್ಷೀಣಿಸುತ್ತಿದ್ದು, ಅಕ್ಟೋಬರ್ 2ನೆ ವಾರದಲ್ಲಿ ಹಿಂಗಾರು ಪ್ರವೇಶಿಸುವ ಸಾಧ್ಯತೆ ಇದ್ದು, ಮುಂಗಾರಿನಲ್ಲಿ ಈ ಬಾರಿ ವಾಡಿಕೆಗಿಂತ ಶೇ.6ರಷ್ಟು ಮಳೆ ಕಡಿಮೆ ಆಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ರಾಜ್ಯದಲ್ಲಾಗುವ ಒಟ್ಟು ಮಳೆಯಲ್ಲಿ ಕೊರತೆ ಆಗಿಲ್ಲವಾದರೂ, ಜಿಲ್ಲಾವಾರು ಮಳೆ ವಿಶ್ಲೇಷಿಸಿದಾಗ 11 ಜಿಲ್ಲೆಗಳಲ್ಲಿ ಕೊರತೆಯಾಗಿದ್ದು, ಅರಬ್ಬಿ ಸಮುದ್ರ ಆಗ್ನೇಯ ಭಾಗದಲ್ಲಿ ಅ.6ರಂದು ವಾಯುಭಾರ ಕುಸಿಯುವ ಸಾಧ್ಯತೆ ಇದೆ. ಪರಿಣಾಮ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳ ಮೇಲೆ ಹೆಚ್ಚು ಪ್ರಭಾವ ಬೀರುವ ಸಾಧ್ಯತೆಯಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News