ಸಾಲ ಮನ್ನಾ ಅವಧಿ ವಿಸ್ತರಣೆ

Update: 2018-10-06 15:03 GMT

ಬೆಂಗಳೂರು, ಅ.6: ಬೆಳೆ ಸಾಲ ಮನ್ನಾ ಯೋಜನೆ -2018 ರಡಿಯಲ್ಲಿ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆಯಲು ಅವಧಿ/ಗಡುವನ್ನು ಅ.31ರವರೆಗೆ ವಿಸ್ತರಿಸಲಾಗಿದೆ ಎಂದು ಸಹಕಾರ ಸಚಿವರ ಕಾರ್ಯಾಲಯದ ಪ್ರಕಟಣೆ ತಿಳಿಸಿದೆ. 

ರೈತರ ಅನುಕೂಲಕ್ಕೆ ತಕ್ಕಂತೆ ಕಾಲಾವಕಾಶವನ್ನು ವಿಸ್ತರಣೆ ಮಾಡಲಾಗುವುದು ಮತ್ತು ರೈತರಿಗೆ ಕೂಡಲೇ ದಾಖಲೆ ನೀಡಿ ಎಂದು ಸಹಕಾರ ಸಂಘಗಳು/ಸಹಕಾರಿ ಬ್ಯಾಂಕುಗಳ ಒತ್ತಾಯಿಸಬಾರದು ಎಂದು ಸಹಕಾರ ಸಂಘಗಳ ನಿಬಂಧಕರು ಸುತ್ತೋಲೆಯನ್ನು ಹೊರಡಿಸಲಾಗಿರುತ್ತದೆ. ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಅರ್ಜಿ ಸಲ್ಲಿಕೆಯನ್ನು ಮತ್ತಷ್ಟು ಸರಳಗೊಳಿಸಿ, ಸಲ್ಲಿಕೆ ದಿನಾಂಕವನ್ನು ಅ.31ರವರೆಗೆ ವಿಸ್ತರಿಸಲಾಗಿದೆ. ಬೆಳೆ ಸಾಲ ಮನ್ನಾ ಯೋಜನೆ -2018 ರಡಿಯಲ್ಲಿ ಈಗಾಗಲೇ ರೈತ ಕುಟುಂಬದ ಮುಖ್ಯಸ್ಥರು ಸಾಲ ಮನ್ನಾ/ಸ್ವಯಂ ದೃಢೀಕರಣ ಅರ್ಜಿಯನ್ನು ಸಹಕಾರ ಸಂಘಕ್ಕೆ/ಸಹಕಾರಿ ಬ್ಯಾಂಕಿಗೆ ಸಲ್ಲಿಸಿದ್ದರೆ, ಅಂತಹ ರೈತರನ್ನು ಹೊರತುಪಡಿಸಿ ಇನ್ನು ಮುಂದೆ ರೈತರಿಂದ ಸ್ವಯಂ ದೃಢೀಕರಣ ಪತ್ರ ಪಡೆಯಲು ಸೂಚಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News