ಕವನ ರಚನಾ ಸ್ಪರ್ಧೆಗೆ ಆಹ್ವಾನ

Update: 2018-10-09 16:05 GMT

ಬೆಂಗಳೂರು, ಅ.9 : ಮತ್ತಿಕೆರೆಯ ದ.ರಾ.ಬೇಂದ್ರೆ ಕಾವ್ಯ ಕೂಟದ ವತಿಯಿಂದ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ದ.ರಾ.ಬೇಂದ್ರೆ ಸ್ಮತಿ ಕವನ ರಚನಾ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ.

ಒಂದು ಕಾಲೇಜಿನಿಂದ ಭಾಗವಹಿಸಬಹುದಾದ ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ ಇಲ್ಲ. ಆದರೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವವರು ಆಯಾ ಕಾಲೇಜಿನ ಪ್ರಾಧ್ಯಾಪಕರೊಬ್ಬರಿಂದ ಪಡೆದ ಅಧಿಕೃತ ಪರಿಚಯ ಪತ್ರ ತರಬೇಕಿದೆ.

ಸ್ಪರ್ಧೆ ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು. ಆಸಕ್ತರು ಕವನಗಳನ್ನು ಕಳುಹಿಸಿಕೊಡಲು ನ.20 ಕೊನೆಯ ದಿನವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ. 99721 09209 ಅಥವಾ ದ.ರಾ.ಬೇಂದ್ರೆ ಕಾವ್ಯ ಕೂಟ, ನಂ.22, ಶ್ರೀಗುರುದತ್ತ ನಿಲಯ, 1ನೇ ಅಡ್ಡ ರಸ್ತೆ, ನೇತಾಜಿ ನಗರ, ಮತ್ತಿಕೆರೆ, ಬೆಂಗಳೂರು-54. ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News