ಬಾಂಬ್ ಸ್ಫೋಟ ಪ್ರಕರಣ: ಆರೋಪಿ 14 ದಿನಗಳ ಪೊಲೀಸ್ ಕಸ್ಟಡಿಗೆ

Update: 2018-10-11 15:21 GMT

ಬೆಂಗಳೂರು, ಅ.11: ಇಲ್ಲಿನ ಮಡಿವಾಳ ಚೆಕ್ ಪೊಸ್ಟ್ ಬಳಿ ಸಂಭವಿಸಿದ್ದ ಬಾಂಬ್ ಸ್ಫೋಟ ಆರೋಪ ಪ್ರಕರಣ ಸಂಬಂಧ ಆರೋಪಿ ಸಲೀಂ ಅನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ನ್ಯಾಯಾಲಯ ಆದೇಶ ಹೊರಡಿಸಿದೆ.

ಬುಧವಾರ ಕೇರಳದಲ್ಲಿ ಎಸಿಪಿ ಸುಬ್ರಮಣ್ಯ ತಂಡ ಸಲೀಂ ಅನ್ನು ಬಂಧನ ಮಾಡಿ ನಂತರ ಗುರುವಾರ ಬೆಂಗಳೂರಿಗೆ ಕರೆತಂದಿತ್ತು. ಪ್ರಕರಣ ಕುರಿತು ವಿಚಾರಣೆ ನಡೆಸಿದ ನಗರದ 1ನೆ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು, ಆರೋಪಿ ಸಲೀಂ ಅನ್ನು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ.

2008 ರಲ್ಲಿ ಮಡಿವಾಳದ ಚೆಕ್‌ಪೋಸ್ಟ್ ಬಳಿ ಬಾಂಬ್ ಸ್ಫೋಟಗೊಂಡಿತ್ತು. ಈ ಸ್ಫೋಟದಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದರು. ಆರೋಪಿ ಸಲೀಂ ಅನ್ನು ಸಿಸಿಬಿ ಪೊಲೀಸರು 10 ವರ್ಷಗಳಿಂದ ಹುಡುಕಾಟ ನಡೆಸುತ್ತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News