ಕಿಂಗ್‌ಪಿನ್ ಉದಯ ವಿರುದ್ಧ ಮತ್ತೊಂದು ದೂರು

Update: 2018-10-13 14:22 GMT

ಬೆಂಗಳೂರು, ಅ.13: ನಗರದ ಮಲ್ಲೇಶ್ವರಂನಲ್ಲಿ ಕಚೇರಿ ಪಡೆದು 18 ಲಕ್ಷ ಬಾಕಿ ಬಾಡಿಗೆ ಹಣ ನೀಡದೆ ವಂಚಿಸಿದ್ದ ಕಿಂಗ್‌ಪಿನ್ ಉದಯಗೌಡ ವಿರುದ್ಧ ಮತ್ತೊಂದು ಪ್ರಕರಣ ದಾಖಲು ಮಾಡಲಾಗಿದೆ.

ಫೈನಾನ್ಸ್ ಕಚೇರಿ ನಡೆಸುವ ಉದ್ದೇಶದಿಂದ ಮಲ್ಲೇಶ್ವರದ ಲಿಂಕ್ ರಸ್ತೆಯಲ್ಲಿ ಕಚೇರಿಯೊಂದನ್ನು ಬಾಡಿಗೆಗೆ ಪಡೆದು ಕಿಂಗ್‌ಪಿನ್‌ ಉದಯಗೌಡ ಮಾಸಿಕ 32 ಸಾವಿರ ರೂ.ಗಳ ಬಾಡಿಗೆ ನೀಡುವುದಾಗಿ ಕರಾರು ಮಾಡಿಕೊಂಡಿದ್ದ. ಆದರೆ, ಮಾಲಕ ಗಿರೀಶ್ ಅವರಿಗೆ ಕರಾರಿನಂತೆ ಬಾಡಿಗೆ ನೀಡದೆ ಸತಾಯಿಸುತ್ತಿದ್ದ ಉದಯಗೌಡ, ಗಿರೀಶ್ ಗೌಡ ಅವರಿಗೆ ಬೆದರಿಕೆ ಹಾಕಿ ಏಕಾಏಕಿ ಕಟ್ಟಡದಲ್ಲಿರುವ ಎಲ್ಲ ಮಳಿಗೆಗೆಳಿಗೆ ಬೀಗ ಹಾಕಿಸುತ್ತಿದ್ದ ಎಂದು ಆರೋಪಿಸಲಾಗಿದೆ.

ಉದಯಗೌಡನ ಈ ವರ್ತನೆಯನ್ನು ಪ್ರಶ್ನಿಸಿದ ಕಟ್ಟಡದ ಮಾಲಕ ಗಿರೀಶ್ ಗೌಡನಿಗೆ ಪ್ರಾಣ ಬೆದರಿಕೆ ಹಾಕಿದ್ದಾನೆ ಹಾಗೂ ವಾಟ್ಸಾಪ್ ಮೂಲಕ ವಿದೇಶದಿಂದ ಬೆದರಿಕೆ ಸಂದೇಶಗಳನ್ನು ಕಳುಹಿಸುತ್ತಿದ್ದ ಎನ್ನಲಾಗಿದೆ. ಈ ಕುರಿತು ಗಿರೀಶ್ ಗೌಡ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿ, ತನಿಖೆಗೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News