ಒತ್ತುವರಿ ಜಾಗ ತೆರವುಗೊಳಿಸುವಂತೆ ಕರ್ನಾಟಕ ರಿಪಬ್ಲಿಕನ್ ಸೇನೆ ಒತ್ತಾಯ

Update: 2018-10-16 18:20 GMT

ಬೆಂಗಳೂರು, ಅ. 16: ಖಾಸಗಿ ಬಿಲ್ಡರ್ ಒತ್ತುವರಿ ಮಾಡಿಕೊಂಡು, ಕೊಳಚೆ ನೀರು ಮತ್ತು ಶೌಚಾಲಯ ನೀರನ್ನು ಶೇಖರಿಸಲು ನಿರ್ಮಿಸಿರುವ ಟ್ಯಾಂಕನ್ನು ತೆರವುಗೊಳಿಸಬೇಕೆಂದು ಕರ್ನಾಟಕ ರಿಪಬ್ಲಿಕನ್ ಸೇನೆಯ ಮಹಿಳಾ ಘಟಕ ಒತ್ತಾಯಿಸಿದೆ.

ಮಂಗಳವಾರ ನಗರದಲ್ಲಿ ಪ್ರತಿಭಟನೆ ನಡೆಸಿ ಮಾತನಾಡಿ ಸೇನೆಯ ಪದಾಧಿಕಾರಿಗಳು, ಮಹದೇವಪುರ ವಿಧಾನಸಭಾ ಕೇತ್ರದ ದೇವರಬಿಸನಹಳ್ಳಿ ಗ್ರಾಮದ ಕೊಳಚೆ ನಿರ್ಮೂಲನ ಮಂಡಳಿಗೆ ಸೇರಿದ ಸರ್ವೆ ನಂ.15 ಮತ್ತು 16ರ ಜಾಗವನ್ನು ಈ ಕೂಡಲೇ ಜಾಗವನ್ನು ತೆರವುಗೊಳಿಸಿ ಬಡವರಿಗೆ ನೀಡಬೇಕು ಎಂದು ಆಗ್ರಹಿಸಿದರು.

ಈ ಸರ್ವೆ ನಂಬರ್‌ನಲ್ಲಿ ಹಕ್ಕು ಪತ್ರ ಪಡೆದಿದ್ದು, ಖಾತೆ ಮಾಡಿಕೊಳ್ಳಲು ಕೊಳಚೆ ನಿರ್ಮೂಲನ ಮಂಡಳಿ ವತಿಯಿಂದ ನಿರುಪೇಕ್ಷಣಾ ಪತ್ರ ನೀಡಬೇಕು. ನಗರ ಹಾಗೂ ಸುತ್ತಮುತ್ತಲಿನ ಬಡವರು ವಸತಿಗಾಗಿ ಅನೇಕ ಬಾರಿ ಸರಕಾರಕ್ಕೆ ಮನವಿ ಸಲ್ಲಿಸಿದ್ದರೂ ಸಮಸ್ಯೆ ಈಡೇರಿಲ್ಲ. ಅಧಿಕಾರಿಗಳ ನಿಧಾನಗತಿಯಿಂದಾಗಿ ಸರಕಾರಿ ಭೂಮಿಗಳನ್ನು ಉಳ್ಳವರು ಕಬಳಿಸುತ್ತಿದ್ದಾರೆ ಎಂದರು.

ಬಿಡಿಎ, ರಾಜೀವ್ ಗಾಂಧಿ ವಸತಿ ಅಭಿವೃದ್ಧಿ ನಿಗಮ, ಕೊಳಚೆ ನಿರ್ಮೂಲನ ಮಂಡಳಿಗಳು ಸಹ ಜನಸಾಮಾನ್ಯರ ಪರವಾಗಿ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪ್ರತಿಭಟನಾಕಾರರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News