ಇಮ್ರಾನ್ ಕೊಲೆ ಪ್ರಕರಣ: ರೌಡಿ ಮೈಕಲ್ ವಶಕ್ಕೆ

Update: 2018-10-16 18:28 GMT

ಬೆಂಗಳೂರು, ಅ.16: ಇಮ್ರಾನ್ ಎಂಬಾತನನ್ನು ಕೊಲೆಗೈದಿದ್ದ ಪ್ರಕರಣ ಸಂಬಂಧ ರೌಡಿಶೀಟರ್ ಮೈಕಲ್‌ನನ್ನು ಇಲ್ಲಿನ ಬಾಣಸವಾಡಿ ಠಾಣಾ ಪೊಲೀಸರು ವಶಕ್ಕೆ ಪಡೆದು, ವಿಚಾರಣೆಗೊಳಪಡಿಸಿದ್ದಾರೆ.

ಸೆ.13 ರಂದು ಬಾಣಸವಾಡಿಯ ಜಾನಕಿರಾಮ್ ಬಡಾವಣೆ ಬಳಿ ಕ್ಷುಲ್ಲಕ ವಿಚಾರಕ್ಕೆ ಇಮ್ರಾನ್ ಎಂಬ ಅಮಾಯಕ ಯುವಕನನ್ನು ಮೈಕಲ್ ಹಾಗೂ ಖಾದರ್, ಸುಭಾಷ್ ಮತ್ತು ಜಾನ್ ಎಂಬುವರು ಸೇರಿದಂತೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆಗೈದಿದ್ದರು. ಈ ಸಂಬಂಧ ಮೂವರನ್ನು ಪೊಲೀಸರು ಬಂಧಿಸಿದ್ದರು.

ಇತ್ತೀಚೆಗೆ ನಗರದ ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ನಡೆಸಿದ್ದ ರೌಡಿ ಪರೇಡ್‌ನಲ್ಲಿ ಆರೋಪಿ ಮೈಕಲ್ ಹಾಜರಾಗಿದ್ದ. ತದನಂತರ ನಾಪತ್ತೆಯಾಗಿದ್ದ. ಹೀಗಾಗಿ, ಈತನನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಬಾಣಸವಾಡಿ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News