ದಸರಾ ಶುಭಾಶಯ ಕೋರಿದ ಮುಖ್ಯಮಂತ್ರಿ ಕುಮಾರಸ್ವಾಮಿ
Update: 2018-10-18 05:42 GMT
ಬೆಂಗಳೂರು, ಅ. 16: ಮುಖ್ಯಮಂತ್ರಿ ಎಚ್ ಡಿ. ಕುಮಾರಸ್ವಾಮಿ ಅವರು ನಾಡಿನ ಜನತೆಗೆ ಮಹಾ ನವಮಿ, ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯ ಕೋರಿದ್ದಾರೆ.
ದುಷ್ಟರ ವಿರುದ್ಧ ಶಿಷ್ಟರ ವಿಜಯದ ಪ್ರತೀಕ ದಸರಾ ಹಬ್ಬ. ಸಮಾಜವನ್ನು ಬಾಧಿಸುವ ಪಿಡುಗುಗಳು, ಸಮಸ್ಯೆಗಳನ್ನು ಶಾಂತಿ, ಸಂಯಮ, ಏಕತೆಯ ಆಯುಧಗಳಿಂದ ಎದುರಿಸೋಣ. ನಾಡಿನ ಅಭಿವೃದ್ಧಿಗೆ ಶ್ರಮಿಸೋಣ. ತಾಯಿ ಭುವನೇಶ್ವರಿ ನಾಡಿನ ಜನತೆಗೆ ಸುಖ, ಶಾಂತಿ ಸಮೃದ್ಧಿಯನ್ನು ದಯಪಾಲಿಸಲಿ ಎಂದು ಅವರು ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.