ಅಮೃತಸರ ರೈಲು ದುರಂತ: ರಾವಣನ ವೇಷಧಾರಿ ಮೃತ

Update: 2018-10-20 06:25 GMT
ಫೋಟೊ ಕೃಪೆ: ANI

ಅಮೃತಸರ, ಅ.20: ಅಮೃತ ಸರದಲ್ಲಿ ಶುಕ್ರವಾರ ನಡೆದ ದಸರಾ ಹಬ್ಬದ ರಾಮಲೀಲಾ ಕಾರ್ಯಕ್ರಮದಲ್ಲಿ ರಾವಣನ ವೇಷ ಧರಿಸಿಕೊಂಡಿದ್ದ ವ್ಯಕ್ತಿ ರೈಲು ದುರಂತದಲ್ಲಿ ಸಾವನ್ನಪ್ಪಿದ್ದಾರೆ.

ಮೃತ ರಾವಣನ ವೇಷಧಾರಿಯನ್ನು ದಲ್ಬೀರ್ ಸಿಂಗ್ ಎಂದು ಗುರುತಿಸಲಾಗಿದ್ದು, ಸಿಂಗ್ ಅವರು ತಾಯಿ, ಪತ್ನಿ ಹಾಗೂ 8 ತಿಂಗಳ ಮಗುವನ್ನು ಅಗಲಿದ್ದಾರೆ.

ವಿಧವೆ ಸೊಸೆಗೆ ಸರಕಾರಿ ಉದ್ಯೋಗ ನೀಡುವಂತೆ ಸಿಂಗ್ ತಾಯಿ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್‌ಗೆ ಒತ್ತಾಯಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News