ಆರೋಗ್ಯ ಕಾಪಾಡಿಕೊಳ್ಳುವ ಗರಡಿ ಮನೆ ಅಭಿವೃದ್ಧಿಗೊಳಿಸಿ: ಶಾಸಕ ಎಸ್.ಟಿ.ಸೋಮಶೇಖರ್

Update: 2018-10-21 16:36 GMT

ಬೆಂಗಳೂರು, ಅ.21: ಆರೋಗ್ಯವನ್ನು ಕಾಪಾಡಿಕೊಳ್ಳುವ ಗರಡಿ ಮನೆಗಳನ್ನು ಅಭಿವೃದ್ಧಿ ಮಾಡಬೇಕು ಎಂದು ಕಾಂಗ್ರೆಸ್ ಶಾಸಕ ಎಸ್.ಟಿ.ಸೋಮಶೇಖರ್ ಇಂದಿಲ್ಲಿ ಹೇಳಿದರು.

ನಗರದ ಯಶವಂತಪುರ ಶಾಸಕರ ಪ್ರದೇಶಾಭಿವೃದ್ದಿ ಯೋಜನೆಯಡಿಯಲ್ಲಿ ಕೆಂಗೇರಿಯ ಹಳೇ ಬಸ್ ನಿಲ್ದಾಣದ ತಿಮ್ಮಪ್ಪ ಗರಡಿ ಮನೆಯ ಮೇಲೆ ಕೊಠಡಿ ನಿರ್ಮಾಣಕ್ಕೆ ಶಿಲಾನ್ಯಾಸ ನೇರವೇರಿಸಿ ಮಾತನಾಡಿದ ಅವರು, ಹಿಂದಿನ ಕಾಲದಲ್ಲಿ ಪುರುಷರು ಗರಡಿಮನೆಗೆ ತೆರಳಿ ಕಸರತ್ತನ್ನು ಮಾಡಿ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದರು, ಆದರೆ ಇತ್ತೀಚಿನ ದಿನಗಳಲ್ಲಿ ಗರಡಿ ಮನೆಗಳು ಮಾಯವಾಗುತ್ತಿವೆ ಎಂದರು.

ಇಂದು ಗರಡಿಮನೆಗಳು ಕಣ್ಮರೆಯಾಗಿ ಅದರ ಜಾಗದಲ್ಲಿ ಜಿಮ್‌ಗಳು ಹುಟ್ಟಿಕೊಂಡಿದೆ. ಆದರೆ ಬಡವರು ಯಾರು ಅಲ್ಲಿ ಹೋಗಿ ವ್ಯಾಯಾಮ ಮಾಡಲು ಸಾಧ್ಯವಿಲ್ಲ. ದುಬಾರಿ ಶುಲ್ಕವನ್ನು ಅವರ ಕೈಯಲ್ಲಿ ಬರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸರಕಾರವೇ ಉದ್ಯಾನವನಗಳಲ್ಲಿ ಸಾರ್ವಜನಿಕರ ಅನುಕೂಲಕ್ಕೆ ಜಿಮ್‌ಗಳನ್ನು ಸ್ಥಾಪಿಸುತ್ತಿದೆ. ಅದೇ ರೀತಿ, ತಮ್ಮ ಕ್ಷೇತ್ರದಲ್ಲಿರುವ ಗರಡಿಮನೆಗಳ ಅಭಿವೃದ್ದಿಗೊಳಿಸಲಾಗುವುದು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News