ವಿಧಾನಪರಿಷತ್ತಿಗೆ ಇಬ್ಬರು ಸದಸ್ಯರ ನಾಮನಿರ್ದೇಶನ

Update: 2018-10-30 14:14 GMT

ಬೆಂಗಳೂರು, ಅ.30: ರಾಜ್ಯ ಸರಕಾರದ ಶಿಫಾರಸ್ಸಿನ ಅನ್ವಯ ವಿಧಾನಪರಿಷತ್ತಿಗೆ ಇಬ್ಬರು ಸದಸ್ಯರನ್ನು ನಾಮ ನಿರ್ದೇಶನ ಮಾಡಿ ರಾಜ್ಯಪಾಲ ವಜುಭಾಯಿ ವಾಲಾ ಮಂಗಳವಾರ ಆದೇಶ ಹೊರಡಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿ ಖಾಲಿ ಇರುವ ಮೂರು ಸ್ಥಾನಗಳ ಪೈಕಿ ಎರಡು ಸ್ಥಾನಗಳಿಗೆ ಕಾಂಗ್ರೆಸ್ ಪಕ್ಷದ ಯು.ಬಿ.ವೆಂಕಟೇಶ್ ಹಾಗೂ ಪ್ರಕಾಶ್ ಕೆ.ರಾಥೋಡ್‌ರನ್ನು ರಾಜ್ಯಪಾಲರು, ಸರಕಾರದ ಶಿಫಾರಸ್ಸಿನಂತೆ ನಾಮ ನಿರ್ದೇಶನ ಮಾಡಿದ್ದಾರೆ.

ಒಂದು ಸ್ಥಾನವನ್ನು ಜೆಡಿಎಸ್‌ಗೆ ಬಿಟ್ಟು ಕೊಡಲಾಗಿದ್ದು, ಮಾಜಿ ಶಾಸಕ ಕೋನರೆಡ್ಡಿ, ವಿಧಾನಪರಿಷತ್ತಿನ ಮಾಜಿ ಸದಸ್ಯ ರಮೇಶ್‌ಬಾಬು, ಮುಖಂಡ ಅಮರನಾಥ್ ಸೇರಿದಂತೆ ಇನ್ನಿತರರ ನಡುವೆ ವಿಧಾನಪರಿಷತ್ತಿಗೆ ನಾಮ ನಿರ್ದೇಶನಗೊಳ್ಳಲು ಭಾರಿ ಪೈಪೋಟಿ ಎದುರಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News