ನಂದಿನಿಯಿಂದ ಹೊಸ ಖಾರ ಉತ್ಪನ್ನ ಮಾರುಕಟ್ಟೆಗೆ

Update: 2018-11-01 16:49 GMT

ಬೆಂಗಳೂರು, ನ.1: ಕರ್ನಾಟಕ ಹಾಲು ಮಹಾ ಮಂಡಳಿಯ ಕೇಂದ್ರ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ 63ನೆ ಕನ್ನಡ ರಾಜ್ಯೋತ್ಸವವು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ರಾಕೇಶ್‌ಸಿಂಗ್ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು. ಇದೇ ವೇಳೆ ನಂದಿನಿಯ ಹೊಸ ಖಾರ ಉತ್ಪನ್ನಗಳಾದ ನಂದಿನಿ ಬೆಣ್ಣೆ ಮುರಕು, ನಂದಿನಿ ಖಾರ ಬೂಂದಿ, ನಂದಿನಿ ಬಾಂಬೆ ಮಿಕ್ಸರ್, ನಂದಿನಿ ಮಸಾಲ ಕೊಡಬಳೆಗಳನ್ನು ಗ್ರಾಹಕರಿಗೆ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಹಾಲು ಮಹಾ ಮಂಡಳಿಯ ಎಲ್ಲ ಹಿರಿಯ ಅಧಿಕಾರಿಗಳು, ಸಿಬ್ಬಂದಿಗಳು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News