ತವರು ಮನೆಯಿಂದ ವಾಪಾಸ್ ಬಾರದ ಪತ್ನಿ: ನೊಂದ ಪತಿ ಆತ್ಮಹತ್ಯೆ

Update: 2018-11-02 16:48 GMT

ಬೆಂಗಳೂರು, ನ.2: ಪೋಷಕರ ಮನೆಗೆ ಹೋಗಿದ್ದ ಪತ್ನಿ, ಹಲವು ದಿನಗಳಾದರೂ, ವಾಪಸ್ಸು ಬರದ ಕಾರಣದಿಂದಾಗಿ ನೊಂದು, ಪತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನಲಾಗಿದೆ.

ಎಸ್‌ಜಿ ನಗರದ ಹುಚ್ಚಪ್ಪ ರಸ್ತೆಯ ಸೋಮಶೇಖರ್ (44) ಎಂಬುವರು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಖಾಸಗಿ ಕಂಪೆನಿಯ ಉದ್ಯೋಗಿಯಾಗಿದ್ದ ಸೋಮಶೇಖರ್ ಅವರ ಪತ್ನಿ ಇತ್ತೀಚೆಗೆ ಕೌಟುಂಬಿಕ ಹಿನ್ನೆಲೆಯಲ್ಲಿ ಜಗಳ ಮಾಡಿಕೊಂಡು ತವರಿಗೆ ಹೋಗಿದ್ದರು. ಮನೆಗೆ ವಾಪಾಸ್ ಬರುವಂತೆ ಹಲವು ಬಾರಿ ಕರೆದರೂ, ಆಕೆ ಬರದಿದ್ದರಿಂದ ನೊಂದು ಗುರುವಾರ ರಾತ್ರಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿ ಕೊಂಡಿರುವುದಾಗಿ ತಿಳಿದುಬಂದಿದೆ.

ಈ ಸಂಬಂಧ ಮೊಕದ್ದಮೆ ದಾಖಲಿಸಿಕೊಂಡಿರುವ ವಿಜಯನಗರ ಠಾಣಾ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News