ಕುವೈತ್ ನಲ್ಲಿ ಅಲ್-ಮದೀನ ಮಂಜನಾಡಿ ಬೆಳ್ಳಿ ಹಬ್ಬದ ಪ್ರಚಾರ ಸಭೆ

Update: 2018-11-03 07:25 GMT

ಕುವೈತ್, ನ. 3: ಅಲ್-ಮದೀನ ಇಸ್ಲಾಮಿಕ್ ಕಾಂಪ್ಲೆಕ್ಸ್ ಮಂಜನಾಡಿ ಇದರ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿಯ ವತಿಯಿಂದ  ಪ್ರಚಾರ ಸಭೆಯು ಕುವೈತ್  ದಾಸ್ಮಾ ಹಾಲ್ ನಲ್ಲಿ ಶುಕ್ರವಾರ ಮಗ್ರಿಬ್ ನಮಾಝ್ ಬಳಿಕ ಅಬ್ಬಾಸ್ ಉಸ್ತಾದ್ ನೇತೃತ್ವದಲ್ಲಿ, ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಬಾವಕ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದ ಉದ್ಘಾಟನೆಯನ್ನು  ಐಸಿಎಫ್ ರಾಷ್ಟ್ರೀಯ ಅಧ್ಯಕ್ಷ ದಾರಿಮಿ ಉಸ್ತಾದ್ ನೆರವೇರಿಸಿದರು. ಇಸ್ಮಾಯಿಲ್ ನಾಟೆಕಲ್ ಕಿರಾಅತ್ ಪಟಿಸಿದರು. ಕೆಸಿಎಫ್ ಕುವೈತ್  ರಾಷ್ಟ್ರೀಯ ಅಧ್ಯಕ್ಷ ಅಬ್ದುರಹ್ಮಾನ್ ಸಖಾಫಿ ಆಶಂಸ ಕೋರಿದರು. 

ವೇದಿಕೆಯಲ್ಲಿ ಅಲ್-ಮದೀನ ಕುವೈತ್ ಮಾಜಿ ಅಧ್ಯಕ್ಷ ಅಬೂಬಕರ್ ಕಡಂಬು, ಅಲ್ ಮದೀನಾ ದಮ್ಮಾಮ್ ವಲಯ ಸಮಿತಿ ಪ್ರಧಾನ ಕಾರ್ಯದರ್ಶಿ  ಇಕ್ಬಾಲ್ ಮಲ್ಲೂರು, ನೌಫಲ್ ಸಖಾಫಿ ಕಳಸ ಹಾಗೂ ಕೆಸಿಎಫ್, ಐಸಿಎಫ್ ನಾಯಕರು ಉಪಸ್ಥಿತರಿದ್ದರು.

ಅಲ್-ಮದೀನ ಕುವೈತ್ ರಾಷ್ಟ್ರೀಯ ಸಮಿತಿ, ಕೆಸಿಎಫ್ ಕುವೈತ್ ರಾಷ್ಟ್ರೀಯ ಸಮಿತಿ, ಕೊಡಗು ವೆಲ್ಫೇರ್ ಸಮಿತಿಯ ವತಿಯಿಂದ ಅಬ್ಬಾಸ್ ಉಸ್ತಾದ್ ಹಾಗೂ ನೌಫಳ್ ಸಖಾಫಿ ಕಳಸ ಅವರನ್ನು ಸನ್ಮಾನಿಸಲಾಯಿತು. ಪ್ರಧಾನ ಕಾರ್ಯದರ್ಶಿ ಮೂಸ ಇಬ್ರಾಹಿಮ್ ಸ್ವಾಗತಿಸಿದರು. ಝಕ್ರಿಯಾ ಆನೆಕಲ್ ವಂದಿಸಿದರು. ಕೆಸಿಎಫ್ ಅಂತರ್ ರಾಷ್ಟ್ರೀಯ ನಾಯಕ ಹುಸೈನ್ ಎರ್ಮಾಡ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News