ರಣಜಿ ಟ್ರೋಫಿಗೆ ವಾಪಸಾಗುವ ವಿಶ್ವಾಸದಲ್ಲಿ ಸಹಾ

Update: 2018-11-11 18:29 GMT

ಕೋಲ್ಕತಾ, ನ.11: ಜುಲೈನಲ್ಲಿ ಭುಜ ನೋವಿಗೆ ಒಳಗಾಗಿದ್ದ ಭಾರತದ ಟೆಸ್ಟ್ ವಿಕೆಟ್‌ಕೀಪರ್ ವೃದ್ಧಿಮಾನ್ ಸಹಾ ಡಿಸೆಂಬರ್‌ನಲ್ಲಿ ರಣಜಿ ಟ್ರೋಫಿಯಲ್ಲಿ ಆಡುವ ಮೂಲಕ ಸಕ್ರಿಯ ಕ್ರಿಕೆಟ್‌ಗೆ ವಾಪಸಾಗುವ ವಿಶ್ವಾಸದಲ್ಲಿದ್ದಾರೆ.

‘‘ಇದೀಗ ನಾನು ಮೊದಲಿಗಿಂತ ಚೆನ್ನಾಗಿದ್ದೇನೆ. ಡಿಸೆಂಬರ್‌ನಲ್ಲಿ ಕ್ರಿಕೆಟ್‌ಗೆ ವಾಪಸಾಗುವ ವಿಶ್ವಾಸದಲ್ಲಿದ್ದೇನೆ. ನಾನು ಕ್ರಮಬದ್ದವಾಗಿ ಅಭ್ಯಾಸ ನಡೆಸುತ್ತಿದ್ದೇನೆ. ರಣಜಿ ಟ್ರೋಫಿಯಲ್ಲಿ ಆಡಲು ಫಿಟ್ ಆಗುವ ವಿಶ್ವಾಸ ನನಗಿದೆ. ನಾನು ಈಗಾಗಲೇ ನೆಟ್ ಪ್ರಾಕ್ಟೀಸ್ ಆರಂಭಿಸಿದ್ದು, ಇನ್ನಷ್ಟೇ ಮ್ಯಾಚ್ ಫಿಟ್ನೆಸ್ ಪಡೆಯಬೇಕಾಗಿದೆ’’ ಎಂದು ಸಹಾ ಹೇಳಿದ್ದಾರೆ.

 2014ರಲ್ಲಿ ಎಂಎಸ್ ಧೋನಿ ನಿವೃತ್ತಿಯಾದ ಬಳಿಕ 34ರ ಹರೆಯದ ಸಹಾ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ನಂ.1 ವಿಕೆಟ್‌ಕೀಪರ್ ಆಗಿದ್ದರು. ಈತನಕ 32 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಹಾ ಮೂರು ಶತಕಗಳ ಸಹಿತ 1164 ರನ್ ಗಳಿಸಿದ್ದಾರೆ. ಈ ವರ್ಷಾರಂಭದಲ್ಲಿ ಕೇಪ್‌ಟೌನ್‌ನಲ್ಲಿ ಭಾರತದ ಪರ ಕೊನೆಯ ಟೆಸ್ಟ್ ಪಂದ್ಯವನ್ನಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News