ನ.18ಕ್ಕೆ ಪ್ರವಾದಿ ಮುಹಮ್ಮದ್ ಕುರಿತ ಪುಸ್ತಕ ಲೋಕಾರ್ಪಣೆ

Update: 2018-11-14 16:24 GMT

ಬೆಂಗಳೂರು, ನ. 14: ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ವತಿಯಿಂದ ಪ್ರವಾದಿ ಮುಹಮ್ಮದ್(ಸ) ಮಾನವ ಕುಲದ ಶ್ರೇಷ್ಠ ಮಾರ್ಗದರ್ಶಕ ಪುಸ್ತಕ ಲೋಕಾರ್ಪಣೆ ಸಮಾರಂಭವನ್ನು ನ.18ರಂದು ಚಾಮರಾಜ ಪೇಟೆಯ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಲಾಗಿದೆ.

ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ ಹಾಗೂ ಹಿರಿಯ ಪತ್ರಕರ್ತ ಎನ್.ಎಸ್.ಶಂಕರ್ ಪ್ರವಾದಿ ಮುಹಮ್ಮದ್‌ರ ಮಾನವಕುಲದ ಶ್ರೇಷ್ಠ ಮಾರ್ಗದರ್ಶಕ ಪುಸ್ತಕವನ್ನು ಬಿಡುಗಡೆ ಮಾಡಲಿದ್ದು, ಮುಖ್ಯ ಅತಿಥಿಗಳಾಗಿ ಸಾಹಿತಿ ಶಾಕಿರಾ ಖಾನುಮ್, ಶಾಂತಿ ಪ್ರಕಾಶನದ ವ್ಯವಸ್ಥಾಪಕ ಜನಾಬ್ ಮುಹಮ್ಮದ್ ಕುಂಞ, ಹಾಗೂ ಅಧ್ಯಕ್ಷತೆಯನ್ನು ಶಾಂತಿ ಪ್ರಕಾಶನದ ಜನಾಬ್ ಮುಹಮ್ಮದ್ ಅತ್ತರುಲ್ಲಾ ಷರೀಫ್ ವಹಿಸಿಕೊಳ್ಳಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News