ವರ್ಗಾವಣೆ ಬಿಸಿ: ಡಿವೈಎಸ್ಪಿ ಅಧಿಕಾರಿಗಳು ಸಿಸಿಬಿ ಕಚೇರಿಗೆ ವರ್ಗಾವಣೆ

Update: 2018-11-15 16:57 GMT

ಬೆಂಗಳೂರು, ನ.15: ಸಿಸಿಬಿ ಕಚೇರಿಗೆ ವರ್ಗಾವಣೆಯ ಬಿಸಿ ತಾಕಿದ್ದು, ಡಿವೈಎಸ್ಪಿ(ಸಿವಿಲ್)ಗಳಾದ ಬಾಲರಾಜ್, ಶೋಭಾ ಕಟಾವ್ಕರ್, ವೇಣುಗೋಪಾಲ್ ಹಾಗೂ ಮಂಜುನಾಥ್ ಚೌಧರಿ ಎಂಎಚ್ ಅವರನ್ನು ಬೆಂಗಳೂರು ನಗರದ ಸಿಸಿಬಿ ಕಚೇರಿಗೆ ವರ್ಗಾಯಿಸಿ ಆದೇಶಿಸಲಾಗಿದೆ.

ಸದ್ಯ ಬೆಂಗಳೂರು ಸಿಸಿಬಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಂ.ಎಚ್.ಮಂಜುನಾಥ್ ಚೌಧರಿ, ಪಿ.ಟಿ.ಸುಬ್ರಹ್ಮಣ್ಯ ಹಾಗೂ ಮರಿಯಪ್ಪ ಅವರ ಸ್ಥಾನಕ್ಕೆ ಈ ಮೇಲಿನ ಡಿವೈಎಸ್ಪಿ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News