ಇಂದು ಕೇರಳದಲ್ಲಿ ಬಿಜೆಪಿ ಪ್ರತಿಭಟನೆ

Update: 2018-11-18 07:03 GMT

ಹೊಸದಿಲ್ಲಿ/ಪಂಪಾ, ನ.18: ಮುಂಜಾಗೃತಾ ಕ್ರಮವಾಗಿ ಪೊಲೀಸರು ಶಬರಿಮಲೆ ಅಯ್ಯಪ್ಪ ದೇಗುಲದತ್ತ ತೆರಳುತ್ತಿದ್ದ ಬಿಜೆಪಿ ನಾಯಕರನ್ನು ಶನಿವಾರ ಬಂಧಿಸಿದ್ದು, ಪೊಲೀಸರ ಬಂಧನ ಖಂಡಿಸಿ ಬಿಜೆಪಿಯು ಕೇರಳದಲ್ಲಿ ರವಿವಾರ ಹೆದ್ದಾರಿಯನ್ನು ಬಂದ್ ಮಾಡಿ ಪ್ರತಿಭಟನೆ ನಡೆಸಿದೆ.

ಕೇರಳದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಹಾಗೂ ಅವರ ಪಕ್ಷದ ಕಾರ್ಯಕರ್ತರನ್ನು ನೀಲಕ್ಕಲ್ ಮೂಲ ಶಿಬಿರದ ಬಳಿ ತಡೆದಿರುವ ಪೊಲೀಸರು ವಾಪಾಸು ತೆರಳುವಂತೆ ಸೂಚಿಸಿದ್ದಾರೆ. ಸುರೇಂದ್ರನ್ ವಾಪಸಾಗಲು ನಿರಾಕರಿಸಿದ ಕಾರಣ ಪೊಲೀಸ್ ವಾಹನದಲ್ಲಿ ಕರೆದೊಯ್ಯಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News