ನ.21ರಿಂದ ಬೆಂಗಳೂರು ಪಪೆಟ್ ಉತ್ಸವ

Update: 2018-11-20 16:18 GMT

ಬೆಂಗಳೂರು, ನ.20: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದಲ್ಲಿ ಅನಾವರಣ ಟ್ರಸ್ಟ್ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ನ.21ರಂದು ಸಂಜೆ 6-45ಕ್ಕೆ ಬೆಂಗಳೂರು ಪಪೆಟ್ ಉತ್ಸವ ಚಾಲನೆಗೊಳ್ಳಲಿದೆ.

ಸಾಹಿತಿ ಎಸ್.ರವೀಂದ್ರನಾಥ್ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ವಿಶುಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ. ನ.21ಕ್ಕೆ ಸಂಜೆ 7.15ಕ್ಕೆ ಎಸ್‌ಜಿಆರ್ ಭಾರತೀಯ ತೊಗಲುಗೊಂಬೆ ಸಂಶೋಧನಾ ಹಾಗೂ ತರಬೇತಿ ಕೇಂದ್ರದಿಂದ ‘ಸುಪ್ರಭಾ ವಿಲಾಸ’ ತೊಗಲುಗೊಂಬೆ ಆಟ ಪ್ರದರ್ಶನಗೊಳ್ಳಲಿದೆ.

ನ.22ರಂದು ಸಂಜೆ 7ಕ್ಕೆ ಆಕಾರ್ ಪಪೆಟ್ ಥಿಯೇಟರ್ ವತಿಯಿಂದ ‘ದೋಲಾ ಮರು’ ಪ್ರದರ್ಶನಗೊಳ್ಳಲಿದೆ. ಹಾಗೂ ಸೆ.23ರಂದು ಕೃಷ್ಣನ್ ಕುಟ್ಟಿ ಪುಲವರ್ ಮೆಮೊರಿಯಲ್ ತೂಲಪಾವಕೂತ್ತು ಹಾಗೂ ಪೊಪೆಟ್ ಸೆಂಟರ್ ವತಿಯಿಂದ ಕಂಬರ್ ರಾಮಾಯಣ ಪ್ರದರ್ಶನಗೊಳ್ಳಲಿೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News