ಬೆಂಗಳೂರು: ಆಟೊ ಚಾಲಕ ಆತ್ಮಹತ್ಯೆ
Update: 2018-11-21 17:14 GMT
ಬೆಂಗಳೂರು, ನ.21: ಪಡೆದ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಮನನೊಂದ ಆಟೊ ಚಾಲಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೆಜಿ ಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಬಿಟಿಎಂ ಲೇಔಟ್ನ ವಿನೋಬ ನಗರದ 8ನೆ ಕ್ರಾಸ್ನ ಮನೆಯಲ್ಲಿ ವಾಸವಾಗಿದ್ದ ಜುನೈದ್ ಖಾನ್(38) ಆತ್ಮಹತ್ಯೆ ಮಾಡಿಕೊಂಡ ಆಟೊ ಚಾಲಕ ಎಂದು ತಿಳಿದುಬಂದಿದೆ.
ಜುನೈದ್ ಖಾನ್ ಹಲವರಿಂದ ಸಾಲವಾಗಿ ಹಣ ಪಡೆದುಕೊಂಡಿದ್ದ ಎನ್ನಲಾಗಿದ್ದು, ಹಣಕಾಸು ತೊಂದರೆಯಿಂದಾಗಿ ಪಡೆದಿದ್ದ ಸಾಲ ಹಿಂದಿರುಗಿಸಲಾಗದೆ ಮನನೊಂದು ರಾತ್ರಿ ಮನೆಯಲ್ಲಿ ಕಬ್ಬಿಣದ ರಾಡಿಗೆ ವೇಲ್ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೆಜಿ ಹಳ್ಳಿ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.