ಕನಕದಾಸ ಜಯಂತಿಗೆ ಸಚಿವ ಆರ್.ವಿ.ದೇಶಪಾಂಡೆ ಶುಭಾಶಯ

Update: 2018-11-24 17:09 GMT

ಬೆಂಗಳೂರು, ನ.24: ಕನಕದಾಸ ಜಯಂತಿಯು ನಾಡಿನೆಲ್ಲೆಡೆ ಸದಾಲೋಚನೆ ಮತ್ತು ಸನ್ಮಾರ್ಗಗಳನ್ನು ಕುರಿತು ಸಾತ್ವಿಕವಾಗಿ ಆಲೋಚಿಸುವ ಪ್ರೇರಣೆಯನ್ನು ಜನರಿಗೆ ನೀಡಲಿ ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಶುಭಕೋರಿದ್ದಾರೆ.

ಈ ಬಗ್ಗೆ ಸಂದೇಶ ನೀಡಿರುವ ಅವರು, ಕನಕದಾಸರು ಭಕ್ತಿ ಮತ್ತು ಸಮರ್ಪಣಾ ಮನೋಭಾವಕ್ಕೆ ಇನ್ನೊಂದು ಹೆಸರಾಗಿದ್ದಾರೆ. ಅವರ ಜನುಮದಿನದ ಈ ಸಂದರ್ಭದಲ್ಲಿ ನಾವೆಲ್ಲರೂ ಅವರನ್ನುಅಂತರಂಗದಿಂದ ಸ್ಮರಿಸೋಣ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News