ದಮ್ಮಾಮ್: ದಾರುಲ್ ಅಶ್ ಅರಿಯದಿಂದ 'ಗ್ರಾಂಡ್ ಮೀಲಾದ್' ಕಾರ್ಯಕ್ರಮ

Update: 2018-11-27 06:46 GMT

ದಮ್ಮಾಮ್, ನ.27: ದಾರುಲ್ ಅಶ್ ಅರಿಯ ದಮ್ಮಾಮ್ ಸಮಿತಿಯ ವತಿಯಿಂದ 'ಗ್ರಾಂಡ್ ಮೀಲಾದ್' ಕಾರ್ಯಕ್ರಮ ಇತ್ತೀಚೆಗೆ ನಡೆಯಿತು

ಕೆಸಿಎಫ್ ಹಾಲ್ ನಲ್ಲಿ ನಡೆದ ಕಾರ್ಯಕ್ರಮದ ಆರಂಭದಲ್ಲಿ ಸ್ವಲಾತ್ ಮಜ್ಲಿಸ್ ಮತ್ತು ಮೌಲಿದ್ ಮಜ್ಲಿಸ್ ಜರುಗಿತು. ಜಾಫರ್ ಸಾದಿಕ್ ತಂಙಳ್ ಶಿವಮೊಗ್ಗ ನೇತೃತ್ವ ವಹಿಸಿದ್ದರು.

ಬಳಿಕ ಅಮಾನುದ್ದೀನ್ ಮತ್ತು ಸಂಗಡಿಗರಿಂದ ಇಶಲ್ ರಾತ್ರಿ ವಿಶೇಷ ಕಾರ್ಯಕ್ರಮ ನಡೆಯಿತು.

ಅಶ್ ಅರಿಯ ಸಂಘಟಕ ಹಾರಿಸ್ ಹನೀಫಿ ಗಾಂಧಿ ನಗರ ಹುಬ್ಬುರ್ರಸೂಲ್ ಭಾಷಣ ಮಾಡಿದರು. 

ಸಮಿತಿಯ ಅಧ್ಯಕ್ಷ ಫಾರೂಕ್ ಕಾಟಿಪಳ್ಳ ಅಧ್ಯಕ್ಷತೆ ವಹಿಸಿದ್ದರು.

ಕಾರ್ಯಕ್ರಮದಲ್ಲಿ‌ ಕೆಸಿಎಫ್ ರಾಷ್ಟ್ರೀಯ ಸಮಿತಿಯ ಅಧ್ಯಕ್ಷ ಯೂಸುಫ್ ಸಖಾಫಿ ಬೈತಾರ್, ದಮ್ಮಾಮ್ ಝೋನ್ ಅಧ್ಯಕ್ಷ ಉಮರುಲ್ ಫಾರೂಕ್ ಮುಸ್ಲಿಯಾರ್ ಕುಪ್ಪೆಟ್ಟಿ, ಅಬ್ದುಲ್ ರಶೀದ್ ಸಖಾಫಿ ಮಿತ್ತೂರು, ಖಾಸಿಂ ಮುಸ್ಲಿಯಾರ್ ಅಡ್ಡೂರು, ಅಬೂಬಕರ್ ಮುಸ್ಲಿಯಾರ್ ಮಂಜನಾಡಿ, ಮಜೀದ್ ಬಾಅಹ್ಸನಿ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News