ದಮ್ಮಾಮ್: "ಆರೋಗ್ಯಮಯ ಜೀವನ ಆನಂದದಾಯಕ ಜೀವನ" ಅಭಿಯಾನ

Update: 2018-11-27 11:26 GMT

ದಮ್ಮಾಮ್, ನ. 27:  ಬದಲಾವಣೆಯಾಗುತ್ತಿರುವ ಇಂದಿನ ಸಮಾಜದಲ್ಲಿ ಜನರ ಜೀವನ ಕ್ರಮವೂ ಬದಲಾವಣೆಯಾಗುತ್ತಿರುವಾಗ ಜನರು ತಾಂತ್ರಿಕ ಪರಿಸ್ಥಿತಿಗಳಿಗೆ ಒಗ್ಗಿಕೊಂಡು ಬದಲಾಗುತ್ತಿದ್ದು ಇದು ಮನುಷ್ಯನ ಆರೋಗ್ಯಮಯ ಜೀವನದ ಮೇಲೆ ಬಹಳ ಪರಿಣಾಮ ಬೀರುತ್ತಿದೆ. ಪ್ರಮುಖವಾಗಿ ಮಹಿಳೆಯರು ತಮ್ಮ ಆರೋಗ್ಯದ ದೃಷ್ಟಿಯಿಂದ ಕೆಲವೊಂದು ಹಳೆಯ ಕಾಲದ ಜೀವನ ಪದ್ದತಿಯನ್ನು ಜೀವಂತವಾಗಿಸಿದಲ್ಲಿ  ಆನಂದದಾಯಕ ಜೀವನ ನಡೆಸಲು ಸಾಧ್ಯವಾಗಬಹುದು ಎಂದು ಬದರ್ ಅಲ್ ಖಲೀಜ್ ಆಸ್ಪತ್ರೆ ಜುಬೈಲ್ ಇದರ ವ್ಯೆದ್ಯಕೀಯ ನಿರ್ದೇಶಕಿ ಡಾ. ರಾಗಿಣಿ ಬೇಕೂರ್ ಹೇಳಿದರು.

ಅವರು ದಮ್ಮಾಮ್ ನಲ್ಲಿ ವುಮೆನ್ಸ್ ಫ್ರೆಟರ್ನಿಟಿ ಫೋರಂ ಕರ್ನಾಟಕ ರಾಜ್ಯ, ಪೂರ್ವ ಪ್ರಾಂತ್ಯ ಆಯೋಜಿಸಿದ್ದ "ಆರೋಗ್ಯಮಯ ಜೀವನವೇ ಆನಂದದಾಯಕ ಜೀವನ" ಎಂಬ ಅಭಿಯಾನದಲ್ಲಿ ಮಾತನಾಡುತ್ತಾ ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡು ಮಾತನಾಡಿದ ವುಮೆನ್ಸ್ ಫ್ರೆಟರ್ನಿಟಿ ಫೋರಂ ದಮ್ಮಾಮ್ ಅಧ್ಯಕ್ಷೆ ಸಲೀಕಾ ನಾಸಿರ್, ಮಹಿಳೆಯರು ಕೇವಲ ತಮ್ಮ ಕುಟುಂಬದ ಬಗ್ಗೆ ಮಾತ್ರ ಗಮನಹರಿಸದೆ ಸಮಾಜದಲ್ಲಿ ನಡೆಯುವ ಅನ್ಯಾಯ, ದೌರ್ಜನ್ಯಗಳ ಬಗ್ಗೆ ಹೋರಾಟ ನಡೆಸಬೇಕಾಗಿದೆ ಈಗಾದಲ್ಲಿ ನಾವು ಜೊತೆ ಜೊತೆಯಾಗಿ ಒಂದು ಆರೋಗ್ಯವಂತ ಸಮಾಜ ನಿರ್ಮಿಸಲು ಸಾಧ್ಯ ಇದಕ್ಕಾಗಿಯೇ ವುಮೆನ್ಸ್ ಫ್ರೆಟರ್ನಿಟಿ ಫೋರಂ ಪ್ರವಾಸಿ ಮಹಿಳೆಯರಿಗಾಗಿ ಇಂತಹ ಅಭಿಯಾನವನ್ನು ಮುಂದುವರಿಸುತ್ತಾ ಬರಲಿದೆ ಎಂದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಮಂಗಳೂರಿನ ಆಸರೆ ಫೌಂಡೆಶನ್ ಸಲಹಾ ಸಮಿತಿ ಸದಸ್ಯೆ ಖೈರುನ್ನಿಸಾ ಸಯ್ಯದ್ ಮಾತನಾಡಿ ದಾಂಪತ್ಯ ಜೀವನದಲ್ಲಿ ಪಾಲಿಸಿಕೊಳ್ಳಬೇಕಾದ ಶಿಷ್ಟಾಚಾರಗಳ ಬಗ್ಗೆ ತಿಳಿಸಿಕೊಟ್ಟರು. ನಂತರ ಮುಖ್ಯ ಅತಿಥಿಗಳಿಗೆ ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ವುಮೆನ್ಸ್ ಫ್ರೆಟರ್ನಿಟಿ ಫೋರಂ ಜುಬೈಲ್ ಘಟಕದ ಕಾರ್ಯದರ್ಶಿ ಫೈಝಾ ಫಾರೂಕ್ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಝೀನತ್ ಶರೀಫ್ ಕಿರಾಅತ್ ಪಠಿಸುವ ಮೂಲಕ ಚಾಲನೆ ನೀಡಿದರು. ಶಮಿನಾಝ್ ಸಾಜಿದ್ ಸ್ವಾಗತಿಸಿ, ನಾಝಿಯಾ ಶರೀಫ್ ವಂದಿಸಿದರು. ಸಮಿನಾ ಸುನೈಫ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News