ಒಮಾನ್‌ನಲ್ಲಿ ‘ಬಂಟರ ಐಸಿರಿ 2018’ ಕಾರ್ಯಕ್ರಮ

Update: 2018-12-01 10:35 GMT

ಒಮಾನ್, ಡಿ.1: ಒಮಾನ್‌ನಲ್ಲಿ ನೆಲೆಸಿರುವ ಬಂಟ ಸಮುದಾಯದ 31ನೇ ವರ್ಷದ ಒಮಾನ್ ಬಂಟರ ಐಸಿರಿ 2018’ ವಾರ್ಷಿಕ ಕೂಟವು ಮಸ್ಕತ್ ಅಲ್ ಫಾಲಾಝ್ ಹೊಟೇಲ್ ನ ’ಲೀ ಗ್ರಾಂಡ್ ಹಾಲ್’ನಲ್ಲಿ ಇತ್ತೀಚೆಗೆ ಜರುಗಿತು.

ವಿಶ್ವ ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮತ್ತವರ ಪತ್ನಿ ಚಂದ್ರಿಕಾ ಹರೀಶ್ ಶೆಟ್ಟಿ, ಮುಂಬೈ ಬಂಟರ ಸಂಘದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಮಿತಿಯ ಕಾರ್ಯಾಧ್ಯಕ್ಷ ಕರ್ನೂರು ಮೋಹನ್ ರೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.

ಕಾಪು ಮಲ್ಲಾರ್ ದಿವಾಖರ್ ಶೆಟ್ಟಿ ಹಾಗೂ ಕಾಪು ಮಲ್ಲಾರ್ ಶಶಿಧರ ಶೆಟ್ಟಿ ದಂಪತಿ ಸನ್ಮಾನ ಕಾರ್ಯ ನೆರವೇರಿಸಿಕೊಟ್ಟರು. ತುಳುವಸಿರಿ ಅದ್ವಿಕಾ ಶೆಟ್ಟಿ ಹಾಗೂ ಮುಂಬೈಯ ಆಶ್ರಿತಾ ಹಾಗೂ ಅಶ್ಮಿತಾ ಸಹೋದರಿಯರು ನೃತ್ಯ ಪ್ರದರ್ಶಿಸಿದರು.

ಮಮತಾ ಪ್ರಕಾಶ್ ಶೆಟ್ಟಿ ಸ್ವಾಗತಿಸಿದರು. ನಟಿ ನಿರೀಕ್ಷಾ ಶೆಟ್ಟಿ ಪುತ್ತೂರು ಮತ್ತು ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರೂಪಿಸಿದರು. ಅಶೋಕ ಶೆಟ್ಟಿ ಸುರತ್ಕಲ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News