ಡಿ.8 ಕ್ಕೆ ಬೆಂಗಳೂರು ವಾಕಥಾನ್

Update: 2018-12-06 18:04 GMT

ಬೆಂಗಳೂರು, ಡಿ.6: ವಿಕಲಚೇತನರಿಗೆ ಡಿಜಿಟಲ್ ಸೇರ್ಪಡೆಗಾಗಿ ಡಿ.8 ರ ಮಧ್ಯಾಹ್ನ 3ಗಂಟೆಗೆ ನಗರದ ಕಿತ್ತೂರು ರಾಣಿ ಚನ್ನಮ್ಮ ಸ್ಟೇಡಿಯಂನಲ್ಲಿ ಸಮರ್ಥನಂ ಟ್ರಸ್ಟ್ ವತಿಯಿಂದ 14ನೇ ವಾಕಥಾನ್ ಏರ್ಪಡಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್‌ನ ಸಂಸ್ಥಾಪಕ ಮಹಾಂತೇಶ್ ಮಾತನಾಡಿ, ಡಿಜಿಟಲ್ ಕ್ಷೇತ್ರದಲ್ಲಿ ತಂತ್ರಜ್ಞಾನ ಮತ್ತು ಮೂಲ ಸೌಕರ್ಯಗಳ ವಿಸ್ತರಣೆಯಾಗಿದ್ದು, ಡಿಜಿಟಲ್ ಸೌಲಭ್ಯಗಳನ್ನು ಪಡೆದುಕೊಂಡು ವಿಕಲಚೇತನರಿಗೂ ಡಿಜಿಟಲ್ ಮಾಹಿತಿ ಮತ್ತು ಸೇವೆಗಳನ್ನು ತಲುಪುವಂತೆ ಮಾಡಬೇಕಿದೆ. ವಿಕಲಚೇತನರ ಸಬಲೀಕರಣ ಮಾಡುವುದು ಈ ವಾಕಥಾನ್ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.

ವಾಕಥಾನ್‌ನಲ್ಲಿ ಪಾಲ್ಗೊಳ್ಳುವಂತೆ ಬೆಂಗಳೂರಿನ ಪ್ರತಿಯೊಬ್ಬ ನಾಗರಿಕರನ್ನೂ ಸಮರ್ಥನಂ ಸ್ವಾಗತಿಸುತ್ತಿದ್ದು, ಈ ವಾಕಥಾನ್ ಮೂಲಕ ನೆರವಾಗಬೇಕಾಗಿ ಮನವಿ ಮಾಡಿಕೊಳ್ಳುತ್ತಿರುವುದು, ನಿಮ್ಮ ನೆರವು 2019 ರಲ್ಲಿ ಸಾವಿರ ಜನರಲ್ಲಿ ಡಿಜಿಟಲ್ ಸಾಕ್ಷರತೆ ಮೂಡಿಸಲು ಉತ್ತೇಜನ ನೀಡಿದಂತಾಗುತ್ತದೆ ಎಂದು ಹೇಳಿದರು.

ಇನ್ನು, ಬಿಬಿಎಂಪಿ ಮೇಯರ್ ಗಂಗಾಬಿಕೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಶಾಸಕಿ ಸೌಮ್ಯ ರೆಡ್ಡಿ ಪಾಲ್ಗೊಳ್ಳಲಿದ್ದಾರೆ ಎಂದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News