ಮುಖ್ಯಮಂತ್ರಿ ಚಂದ್ರುಗೆ ಕನ್ನಡ ಕಾಯಕ ಶ್ರೀ ಪ್ರಶಸ್ತಿ

Update: 2018-12-10 18:02 GMT

ಬೆಂಗಳೂರು, ಡಿ.10: ವಿಶ್ವ ಕನ್ನಡ ಸಂಘ ನೀಡುವ ಪ್ರತಿಷ್ಠಿತ 2018 ನೆ ಸಾಲಿನ ‘ಕನ್ನಡ ಕಾಯಕ ಶ್ರೀ’ ಪ್ರಶಸ್ತಿಯನ್ನು ಹಿರಿಯ ಕಲಾವಿದ ಮುಖ್ಯಮಂತ್ರಿ ಚಂದ್ರು ಅವರಿಗೆ ನೀಡಲಾಗುತ್ತಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಡಿ.16 ರಂದು ನಡೆಯಲಿದ್ದು, ಎಚ್‌ಎಎಲ್ ಕಾರ್ಖಾನೆಯ ಅಪರ ಮುಖ್ಯ ಮಹಾ ವ್ಯವಸ್ಥಾಪಕ ಸುಧೀರ್ ನಾಯಕ್, ಹೋರಾಟಗಾರ ರಾ.ನಂ.ಚಂದ್ರಶೇಖರ್ ಹಾಗೂ ಎಚ್‌ಎಎಲ್ ನೌಕರರ ಸಂಘದ ಉಪಾಧ್ಯಕ್ಷ ಎಂ.ಸಿ.ಶಿವರಾಮ್ ಪಾಲ್ಗೊಳ್ಳಲಿದ್ದಾರೆ. ಪ್ರಶಸ್ತಿಯು 20 ಸಾವಿರ ನಗದು, ಪ್ರಶಸ್ತಿ ಪತ್ರ, ಸ್ಮರಣಿಕೆಗಳನ್ನು ಒಳಗೊಂಡಿರುತ್ತದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News