ಆತ್ಮಾವಲೋಕನದ ಸಮಯ ಎಂದು ಬಿಜೆಪಿಗೆ ಸಂದೇಶ ನೀಡಿದ ಜನರು: ಶಿವಸೇನೆ

Update: 2018-12-11 15:57 GMT

ಹೊಸದಿಲ್ಲಿ,ಡಿ.11: ಮಂಗಳವಾರ ಪ್ರಕಟವಾಗಿರುವ ಐದು ರಾಜ್ಯಗಳ ಚುನಾವಣಾ ಫಲಿತಾಂಶ, ಇದು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಎಂದು ಬಿಜೆಪಿಗೆ ಮತ್ತು ಕೇಂದ್ರದ ಮೈತ್ರಿ ಸರಕಾರಕ್ಕೆ ಜನರು ನೀಡಿದ ಸ್ಪಷ್ಟ ಸಂದೇಶವಾಗಿದೆ ಎಂದು ಶಿವಸೇನೆ ತಿಳಿಸಿದೆ. ಈ ಫಲಿತಾಂಶವು ಬಿಜೆಪಿಯ ಗೆಲುವಿನ ರಥಕ್ಕೆ ಲಗಾಮು ಹಾಕಿರುವುದನ್ನು ಪ್ರತಿಬಿಂಬಿಸುತ್ತದೆ ಎಂದು ಶಿವಸೇನೆ ವಕ್ತಾರ ಮತ್ತು ರಾಜ್ಯಸಭಾ ಸದಸ್ಯ ಸಂಜಯ್ ರಾವತ್ ತಿಳಿಸಿದ್ದಾರೆ.

ಕೇಂದ್ರ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದರೂ ಶಿವಸೇನೆ ಮತ್ತು ಬಿಜೆಪಿ ನಡುವಿನ ಸಂಬಂಧ ಅಷ್ಟೊಂದು ಉತ್ತಮವಾಗಿಲ್ಲ. 2014ರ ಮಹಾರಾಷ್ಟ್ರ ರಾಜ್ಯ ಚುನಾವಣೆಯನ್ನು ಎರಡೂ ಪಕ್ಷಗಳು ಪ್ರತ್ಯೇಕವಾಗಿ ಹೋರಾಡಿದರೂ ನಂತರ ಸರಕಾರ ರಚಿಸಲು ಮೈತ್ರಿ ಮಾಡಿಕೊಂಡವು.

ಸದ್ಯ ಬಿಜೆಪಿ ಉತ್ತರದ ಪ್ರಮುಖ ಮೂರು ರಾಜ್ಯಗಳಾದ ರಾಜಸ್ಥಾನ, ಮಧ್ಯ ಪ್ರದೇಶ ಮತ್ತು ಚತ್ತೀಸ್‌ಗಡದಲ್ಲಿ ತನ್ನ ಹಿಡಿತವನ್ನು ಕಳೆದುಕೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News