ಧೋನಿ ದೇಶೀಯ ಟೂರ್ನಿಗಳಲ್ಲಿ ಆಡಲೇಬೇಕು

Update: 2018-12-12 18:20 GMT

ಹೊಸದಿಲ್ಲಿ, ಡಿ.12: ಎಂ.ಎಸ್.ಧೋನಿ ಹಾಗೂ ತಂಡದ ಇತರ ಹಿರಿಯ ಸದಸ್ಯರು ಭಾರತ ಕ್ರಿಕೆಟ್ ತಂಡದಲ್ಲಿ ಮತ್ತೆ ಸ್ಥಾನ ಪಡೆಯಲು ಸ್ಥಳೀಯ ಟೂರ್ನಿಗಳಲ್ಲಿ ಆಡಲೇಬೇಕು ಎಂದು ತಂಡದ ಮಾಜಿ ಆಲ್‌ರೌಂಡರ್ ಹಾಗೂ ಆಯ್ಕೆ ಸಮಿತಿಯ ಮೊಹಿಂದರ್ ಅಮರನಾಥ್ ಅಭಿಪ್ರಾಯಪಟ್ಟಿದ್ದಾರೆ. ಇತ್ತೀಚೆಗೆ ಭಾರತದ ಟ್ವೆಂಟಿ-20 ತಂಡದಿಂದ ಧೋನಿಯನ್ನು ಕೈಬಿಡಲಾಗಿತ್ತು.ಜೊತೆಗೆ ಟೆಸ್ಟ್ ಕ್ರಿಕೆಟ್‌ನಿಂದ ಅವರು ಬಹಳ ದಿನಗಳ ಹಿಂದೆಯೇ ನಿವೃತ್ತಿ ಘೋಷಿಸಿದ್ದು, ಧೋನಿ ಸದ್ಯ ಏಕದಿನ ಪಂದ್ಯಗಳಲ್ಲಿ ಮಾತ್ರ ಲಭ್ಯರಿದ್ದಾರೆ.

‘‘ಪ್ರತಿಯೊಬ್ಬ ವ್ಯಕ್ತಿ ಭಿನ್ನ ನಿಲುವು ಹೊಂದಿರುತ್ತಾನೆ. ಆದರೆ ನೀವು ರಾಷ್ಟ್ರೀಯ ತಂಡದಲ್ಲಿ ಆಡಬಯಸುವುದಾದರೆ ರಾಜ್ಯ ತಂಡದಲ್ಲೂ ಆಡಬೇಕು. ಒಟ್ಟಾರೆ ಸದ್ಯದ ಪದ್ಧತಿಯನ್ನು ಬಿಸಿಸಿಐ ಬದಲಾಯಿಸುತ್ತದೆ ಎಂದು ನನಗನಿಸಿದೆ. ಬಹಳಷ್ಟು ಹಿರಿಯ ಕ್ರಿಕೆಟಿಗರು ಸ್ಥಳೀಯ ಟೂರ್ನಿಗಳಲ್ಲಿ ಆಡುವುದೇ ಇಲ್ಲ

’’ಎಂದು ಅಮರನಾಥ್ ಸುದ್ದಿಸಂಸ್ಥೆಯೊಂದು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೇಳಿದ್ದಾರೆ.ಸಮಯಾವಕಾಶ ಇದ್ದರೂ ಸ್ಥಳೀಯ ಟೂರ್ನಿ ವಿಜಯ್ ಹಝಾರೆ ಟೂರ್ನಿಯಲ್ಲಿ ಧೋನಿ ಆಡಿರಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News