ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವ ಬೆದರಿಕೆ: ರಕ್ಷಣೆ ಕೋರಿ ಡಿಸಿಎಂಗೆ ಅನಿಲ್ ಲಾಡ್ ಮನವಿ

Update: 2018-12-13 15:44 GMT
ಮಾಜಿ ಶಾಸಕ ಅನಿಲ್‌ ಲಾಡ್‌

ಬೆಂಗಳೂರು, ಡಿ.13: ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಜಿ ಶಾಸಕ ಅನಿಲ್‌ಲಾಡ್‌ಗೆ ಭೂಗತ ಪಾತಕಿ ರವಿ ಪೂಜಾರಿ ಜೀವ ಬೆದರಿಕೆ ಹಾಕಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.

ಅನಿಲ್ ಲಾಡ್‌ಗೆ ಬೆಂಗಳೂರಿನ ಶಿವಕುಮಾರ್ ಎಂಬುವವರು 15 ಕೋಟಿ ಹಣ ನೀಡಬೇಕಿತ್ತು. ಆ ಹಣವನ್ನು ವಾಪಾಸ್ಸು ಕೇಳಿದ್ದಕ್ಕೆ ಭೂಗತ ಪಾತಕಿ ರವಿ ಪೂಜಾರಿಯಿಂದ ಜೀವ ಬೆದರಿಕೆ ಹಾಕಿಸಿದ್ದಾರೆ ಎನ್ನಲಾಗಿದೆ.

ಡಿಸೆಂಬರ್ 8ರಂದು ಮೆಸೇಜ್ ಮಾಡಿ ನಿನ್ನನ್ನು ಶೂಟ್ ಮಾಡಿ ಕೊಲ್ಲುವುದಾಗಿ ಅನಿಲ್ ಲಾಡ್‌ಗೆ ರವಿ ಪೂಜಾರಿ ಎಚ್ಚರಿಕೆ ನೀಡಿದ್ದಾನೆ. ಈ ಕಾರಣದಿಂದ ತನಗೆ ಸೂಕ್ತ ರಕ್ಷಣೆ ನೀಡುವಂತೆ ಅನಿಲ್ ಲಾಡ್ ಡಿಸಿಎಂ ಪರಮೇಶ್ವರ್ ಅವರಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News