ಪೋಷಕರ ಹತ್ಯೆ ಪ್ರಕರಣ: ಕಾನೂನು ಕ್ರಮಕ್ಕೆ ಒತ್ತಾಯ

Update: 2018-12-15 16:18 GMT

ಬೆಂಗಳೂರು, ಡಿ.15: ಮಗನ ತಪ್ಪಿಗೆ ಪೋಷಕರಿಗೆ ಬಲವಂತವಾಗಿ ವಿಷ ಉಣಿಸಿ ಹತ್ಯೆಗೈದಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ವಲಯದ ಐಜಿಪಿಗೆ ಕರ್ನಾಟಕ ಕ್ಷತ್ರೀಯ ಒಕ್ಕೂಟ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ.

ರಾಮನಗರದ ಕಲ್ಲೀಗೌಡನದೊಡ್ಡಿ ಗ್ರಾಮದಲ್ಲಿ ಸಿದ್ದರಾಜು ಮತ್ತು ಸಾಕಮ್ಮ ದಂಪತಿಗಳನ್ನ ಅದೇ ಗ್ರಾಮದ ಜವರೇಗೌಡ ಮತ್ತು ಕುಟುಂಬಸ್ಥರು ಸೇರಿ ಹತ್ಯೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ತನಿಖೆ ನಡೆಸಿ ವಶಕ್ಕೆ ಪಡೆಯಬೇಕೆಂದು ಒಕ್ಕೂಟ ಒತ್ತಾಯಿಸಿದೆ.

ಪ್ರಕರಣದ ತನಿಖೆಗೆ ವಿಶೇಷ ಎಸ್‌ಐಟಿ ತಂಡದ ರಚನೆ ಆಗಬೇಕು. ಅಲ್ಲಿನ ಪ್ರಬಲ ಕೋಮಿನವರಿಂದ ಕೃತ್ಯ ನಡೆದಿದೆ. ಅವರಿಗೆ ರಾಜಕೀಯ ಶಕ್ತಿಗಳ ಬೆಂಬಲವಿದೆ. ಯಾರೋ ಮಾಡಿದ ತಪ್ಪಿಗೆ ಇಬ್ಬರು ಅಮಾಯಕರ ಹತ್ಯೆ ಖಂಡನೀಯ. ಸೂಕ್ತ ತನಿಖೆ ನಡೆಯದೆ ಹೋದಲ್ಲಿ ಕರ್ನಾಟಕ ಕ್ಷತ್ರೀಯ ಒಕ್ಕೂಟದಿಂದ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಮುಖಂಡರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News