ರಿಯಾದ್: ಐಎಫ್ಎಫ್ ವತಿಯಿಂದ ಹುಬ್ಬುರ್ರಸೂಲ್ ಕಾರ್ಯಕ್ರಮ

Update: 2018-12-16 07:43 GMT

ರಿಯಾದ್, ಡಿ. 16: ಇಂಡಿಯಾ ಫ್ರೆಟರ್ನಿಟಿ  ಫೋರಂ ರಿಯಾದ್ ಘಟಕದ ವತಿಯಿಂದ ಹುಬ್ಬುರ್ರಸೂಲ್ ಅಭಿಯಾನದ ಅಂಗವಾಗಿ “ಸಬಲೀಕರಣದ ಪ್ರವಾದಿ ”ಎಂಬ ಸಾರ್ವಜನಿಕ ಕಾರ್ಯಕ್ರಮವನ್ನು ರಿಯಾದ್ ನ ಅಲ್ ಬತ್ತಾ ದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಇಂಡಿಯಾ ಫ್ರೆಟರ್ನಿಟಿ ಫೋರಂ ರಾಜ್ಯ ಸಮಿತಿ ಸದಸ್ಯ ಸಿದ್ದೀಕ್ ಉಳ್ಳಾಲ್  ವಹಿಸಿದ್ದರು. ಮುಖ್ಯ ಪ್ರಭಾಷಣಕಾರರಾಗಿ ಆಗಮಿಸಿದ ಇಂಡಿಯಾ  ಫ್ರೆಟರ್ನಿಟಿ ಫೋರಂ ರಾಜ್ಯ ಸಮಿತಿ ಸದಸ್ಯ ಅಬ್ದುಲ್ ರವೂಫ್ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಪ್ರವಾದಿ (ಸ.ಅ) ಜೀವನ ಶೈಲಿಯು ಪರಿಪೂರ್ಣತೆಯಿಂದ ಕೂಡಿತ್ತು,  ತನ್ನ ಎಲ್ಲಾ ರಂಗಗಳಲ್ಲೂ ಪ್ರವಾದಿ (ಸ.ಅ) ಹಲವಾರು ಕ್ರಾಂತಿಗಳನ್ನು ಮಾಡುವುದರ ಮೂಲಕ ಇಡೀ ಜಗತ್ತಿಗೆ ಮಾದರಿ ಪುರುಷರಾದರು. ಪ್ರವಾದಿ (ಸ.ಅ) ಮೇಲಿನ ಪ್ರೀತಿಯನ್ನು ನಾವು ಇವತ್ತು ಒಂದು ತಿಂಗಳಿಗೆ ಮಾತ್ರ ಸೀಮಿತಗೊಳಿಸದೆ ಅವರು ತೋರಿಸಿಕೊಟ್ಟ ಹೋರಾಟದ ಮಾರ್ಗಗಳು ಇಂದಿಗೂ ಪ್ರಸ್ತುತ ಮತ್ತು ಈ ಜಗತ್ತನ್ನು ಎಲ್ಲಾ  ರಂಗಗಳಲ್ಲೂ ಸಬಲೀಕರಣಗೊಳಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಸವಿಸ್ತಾರವಾಗಿ ವಿವರಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ  ಇಂಡಿಯನ್ ಸೋಷಿಯಲ್ ಫಾರಂ ರಾಜ್ಯ ಸಮಿತಿ ಸದಸ್ಯರಾದ ಮುಹಮ್ಮದ್ ರಫೀಕ್ ಮತ್ತು ಅಬ್ದುಲ್ ಸಲಾಂ ಅಡ್ಡೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ನಿಝಾರ್ ಕರಾಯ ಸ್ವಾಗತಿಸಿದರೆ, ನಾಝಿಂ ಕಾಪು ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News