ಬೆಂಗಳೂರು: ರೌಡಿಶೀಟರ್ ನಾಗರಾಜ್ ಬಂಧನ
Update: 2018-12-19 18:05 GMT
ಬೆಂಗಳೂರು, ಡಿ.19: ಸಂಬಂಧಿಕರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಪ್ರಕರಣ ಸಂಬಂಧ ರೌಡಿಶೀಟರ್ ನಾಗರಾಜ್ ಹಾಗೂ ಈತನ ಪುತ್ರನನ್ನು ಇಲ್ಲಿನ ಶ್ರೀರಾಂಪುರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ತಮಿಳುನಾಡಿನ ತಿರುಪತ್ತೂರು ಬಳಿ ತಲೆಮರೆಸಿಕೊಂಡಿದ್ದ ನಾಗರಾಜ್ ಅನ್ನು ಮಂಗಳವಾರ ಸಂಜೆ ಬಂಧಿಸಿ ಪೊಲೀಸರು ನಗರಕ್ಕೆ ಕರೆ ತಂದಿದ್ದಾರೆ. ಮತ್ತೋರ್ವ ಪುತ್ರ ಗಾಂಧಿ ತಲೆಮರೆಸಿಕೊಂಡಿದ್ದು, ಈತನ ಪತ್ತೆ ಕಾರ್ಯವನ್ನು ಪೊಲೀಸರು ಮುಂದುವರೆಸಿದ್ದಾರೆ ಎನ್ನಲಾಗಿದೆ.
ಇತ್ತೀಚಿಗೆ ಆಸ್ತಿ ವಿಚಾರಕ್ಕಾಗಿ ಸ್ವಂತ ಅತ್ತಿಗೆ ಹಾಗೂ ಆಕೆಯ ಮಗಳ ಮೇಲೆ ನಾಗರಾಜ್, ಆತನ ಪುತ್ರರು ಮಾರಣಾಂತಿಕವಾಗಿ ಹಲ್ಲೆ ನಡೆಸಿ ತಲೆಮರೆಸಿ ಕೊಂಡಿದ್ದರು. ಈ ಸಂಬಂಧ ಶ್ರೀರಾಂಪುರ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿತ್ತು.