ರಾಮಲಿಂಗಾರೆಡ್ಡಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ

Update: 2018-12-20 16:52 GMT

ಬೆಂಗಳೂರು, ಡಿ.20: ಸತತ ಏಳು ಚುನಾವಣೆಗಳಲ್ಲಿ ಜನರಿಂದ ಆಯ್ಕೆಯಾಗಿರುವ ರಾಮಲಿಂಗಾರೆಡ್ಡಿ, 27 ವರ್ಷಗಳಿಂದ ಸಚಿವರಾಗಿ ಅನೇಕ ಇಲಾಖೆಗಳಲ್ಲಿ ಉತ್ತಮ ಕಾರ್ಯ ನಿರ್ವಹಿಸಿದ್ದು, ಜನರ ಸೇವೆಗಾಗಿ ಮತ್ತೊಮ್ಮೆ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಸುವರ್ಣ ಕನಾಟಕ ಹಿತರಕ್ಷಣಾ ವೇದಿಕೆಯ ಒತ್ತಾಯಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಗೌರವ ಸಲಹೆಗಾರ ತಲಕಾಡು ಚಿಕ್ಕರಂಗೇಗೌಡ, ರಾಮಲಿಂಗಾರೆಡ್ಡಿ ಹಿರಿಯ ರಾಜಕಾರಣಿ ಹಾಗೂ ಉತ್ತಮ ಅನುಭವಿಗಳಾಗಿ ಜನಸಾಮಾನ್ಯರ ಸಮಸ್ಯೆಗಳನ್ನು ಅರಿತು ಸೂಕ್ತ ರೀತಿಯಲ್ಲಿ ಸ್ಪಂದಿಸುವ ಮೂಲಕ ಜನರ ವಿಶ್ವಾಸವನ್ನು ಗಳಿಸಿದ್ದಾರೆ. ಹೀಗಾಗಿ, ಅವರಿಗೆ ಸಚಿವ ಸ್ಧಾನ ನೀಡಬೇಕೆಂದು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News