ದಮ್ಮಾಮ್ : 'ಪ್ರಸ್ತುತ ಕ್ಯಾಲೆಂಡರ್-2019' ಬಿಡುಗಡೆ ಕಾರ್ಯಕ್ರಮ

Update: 2018-12-25 13:08 GMT

ದಮ್ಮಾಮ್, ಡಿ. 25 : ಪ್ರಸ್ತುತ ಓದುಗರ ವೇದಿಕೆ ಪೂರ್ವ ಪ್ರಾಂತ್ಯ ಇದರ ವತಿಯಿಂದ 'ಪ್ರಸ್ತುತ ಕ್ಯಾಲೆಂಡರ್ 2019' ಬಿಡುಗಡೆ ಕಾರ್ಯಕ್ರಮವು  ಸಾಸ್ರೆಫ್ ಬೀಚ್‌ ಕ್ಯಾಂಪ್ ಜುಬೈಲ್ ನಲ್ಲಿ ಇತ್ತೀಚೆಗೆ ನಡೆಯಿತು. 

ಕಾರ್ಯಕ್ರಮವನ್ನು ಓದುಗರ ವೇದಿಕೆಯ ಸದಸ್ಯರಾದ ಅನ್ವರ್ ಮಠ ಅತಿಥಿಗಳನ್ನು ಸ್ವಾಗತಿಸುವ ಮೂಲಕ ಉದ್ಘಾಟಿಸಿದರು.

ಇಂಡಿಯನ್ ಸೋಶಿಯಲ್ ಫೋರಂ (ಐಎಸ್ ಎಫ್)ನ ಆಶಿಕ್ ಮಾಚಾರ್  ವಿಷಯ ಮಂಡಿಸಿದರು. ನಂತರ ಪ್ರಸ್ತುತ ಓದುಗರರಾದ ನೌಫಲ್ ಬಂದರ್ ಮತ್ತು‌ ಝುಲ್ಕರ್ ತಮ್ಮ ಅನುಭವವನ್ನು ಹಂಚಿಕೊಂಡರು. ಸಿರಾಜ್ ಬೊಲ್ಲೂರ್ ಮತ್ತು ಅನ್ವರ್ ಮಠ ಕವನ ವಾಚಿಸಿದರು.

ಇಂಡಿಯನ್ ಫ್ರೆಟಾರ್ನಿಟಿ ಫೋರಂ ಪೂರ್ವ ಪ್ರಾಂತ್ಯದ ಅಧ್ಯಕ್ಷ ಅತವುಲ್ಲಾ ಉಚ್ಚಿಲ, ಪ್ರಸ್ತುತ ಓದುಗರ ವೇದಿಕೆ ಅಧ್ಯಕ್ಷ ಇರ್ಷಾದ್ ಜೋಕಟ್ಟೆ ಮತ್ತು ಮ್ಯಾಟಿಕ್ ಕಂಪನಿಯ ‌ಹಬೀಬ್ ಪ್ರಸ್ತುತ ಕ್ಯಾಲೆಂಡರ್ 2019 ಬಿಡುಗಡೆ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ನಂತರ ವೇದಿಕೆಯಲ್ಲಿದ್ದ ಅತಿಥಿಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.‌

ಪ್ರಸ್ತುತ ಓದುಗರ ವೇದಿಕೆ ಅಧ್ಯಕ್ಷ ಇರ್ಷಾದ್ ಜೋಕಟ್ಟೆ ಪ್ರಸ್ತುತ ಪಾಕ್ಷಿಕದ ಬಗ್ಗೆ ವಿವರಣೆ ನೀಡಿದರು. ಕಾರ್ಯಕ್ರಮವನ್ನು ಫಾಝಿಲ್ ಜುಬೈಲ್ ನಿರೂಪಿಸಿ ನಂತರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News