ಅಯ್ಯಪ್ಪ ದೇಗುಲ ಪ್ರವೇಶಿಸಿದ ಮಹಿಳೆಯರಿಗೆ ಪೊಲೀಸರ ರಕ್ಷಣೆ

Update: 2019-01-02 07:45 GMT

ತಿರುವನಂತಪುರ, ಜ.2: ಬುಧವಾರ ಬೆಳಗ್ಗಿನ ಜಾವ ಶಬರಿಮಲೆ ಬೆಟ್ಟವೇರಿ ಅಯ್ಯಪ್ಪನ ದರ್ಶನ ಪಡೆದು ಇತಿಹಾಸ ನಿರ್ಮಿಸಿದ್ದ ಇಬ್ಬರು ಮಹಿಳಾ ಭಕ್ತೆಯರಿಗೆ ಕೇರಳ ಪೊಲೀಸರು ಸಂಪೂರ್ಣ ರಕ್ಷಣೆ ನೀಡುತ್ತಿದ್ದಾರೆ.

ದೇಗುಲ ಪ್ರವೇಶಿಸಿರುವ ಬಿಂದು ಹಾಗೂ ಕನಕದುರ್ಗಾ ಎಂಬ ಮಹಿಳೆಯರನ್ನು ಪೊಲೀಸರು ಸುರಕ್ಷಿತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಈ ಇಬ್ಬರು ಮಹಿಳೆಯರ ಮನೆ ಮೇಲೆ ಆಕ್ರೋಶಭರಿತ ಅಯ್ಯಪ್ಪ ಭಕ್ತರು ಕಲ್ಲೆಸೆದಿದ್ದಾರೆ ಎಂದು ವರದಿಯಾಗಿದೆ. ಮಹಿಳೆಯರು ಶಬರಿಮಲೆ ದೇಗುಲ ಪ್ರವೇಶಿಸಿದ್ದಾರೆಂಬ ಸುದ್ದಿ ಪ್ರಕಟವಾಗುತ್ತಲೇ ಕೇರಳ ಬಿಜೆಪಿ ಘಟಕ ಬಂದ್‌ಗೆ ಕರೆ ನೀಡಿದ್ದು, ಕೆಲವರು ಸಿಎಂ ಪಿಣರಾಯಿ ವಿಜಯನ್ ಕಚೇರಿ ಎದುರು ಧರಣಿ ನಡೆಸಲಾರಂಭಿಸಿದ್ದಾರೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News