ವಿಧಾನಸೌಧದ ಬಳಿ 14 ಲಕ್ಷ ನಗದು ಜಪ್ತಿ ?
Update: 2019-01-04 16:08 GMT
ಬೆಂಗಳೂರು, ಜ.4: ವಿಧಾನಸೌಧದ ಪಶ್ಚಿಮ ಮುಖ್ಯ ದ್ವಾರದ ಬಳಿ ವ್ಯಕ್ತಿಯೋರ್ವನ ಬಳಿಯಿದ್ದ ದಾಖಲೆ ಇಲ್ಲದ 14 ಲಕ್ಷ ರೂ. ನಗದು ಇಲ್ಲಿನ ವಿಧಾನಸೌಧ ಠಾಣಾ ಪೊಲೀಸರು ಜಪ್ತಿ ಮಾಡಿದ್ದಾರೆ ಎನ್ನಲಾಗಿದೆ.
ಹಿಂದುಳಿದ ವರ್ಗಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗ ಶೆಟ್ಟಿ ಅವರ ಕಚೇರಿ ಸಿಬ್ಬಂದಿ ಮೋಹನ್ ಎಂಬಾತನಿಂದ ಈ ನಗದು ಜಪ್ತಿ ಮಾಡಲಾಗಿದೆ ಎಂದು ವರದಿಯಾಗಿದೆ.
ಗುತ್ತಿಗೆದಾರನೊಬ್ಬನ ಬಳಿ ಮೋಹನ್ ಎಂಬವರು ಹಣ ಪಡೆದುಕೊಂಡಿದ್ದರು ಎನ್ನುವ ಮಾಹಿತಿ ದೊರೆತಿದೆ. ಈ ಸಂಬಂಧ ಪೊಲೀಸರು, ಆತನನ್ನು ವಿಚಾರಣೆಗೊಳಪಡಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ನನಗೆ ಗೊತ್ತಿಲ್ಲ
ವಿಧಾನಸೌಧದಲ್ಲಿ ಗುತ್ತಿಗೆದಾರನೋರ್ವ ನಮಗೆ ನಗದು ನೀಡಿದ್ದ ಎನ್ನುವ ಮಾಹಿತಿ ಸುಳ್ಳು. ಈ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ಮೋಹನ್ ಬಳಿ ಹಣ ಹೇಗೆ ಬಂದಿದೆ ಎಂಬುವುದು ನನಗೆ ಗೊತ್ತಿಲ್ಲ.
-ಪುಟ್ಟರಂಗ ಶೆಟ್ಟಿ, ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ