ದಾರುನ್ನೂರ್ ಯುಎಇ ಕಲ್ಚರಲ್ ಸೆಂಟರ್: 4ನೇ ವಾರ್ಷಿಕ ಮಹಾ ಸಭೆ, ನೂತನ ಸಮಿತಿ ರಚನೆ

Update: 2019-01-10 09:25 GMT

ದುಬೈ, ಜ. 10: ದಾರುನ್ನೂರ್ ಎಜುಕೇಷನ್ ಸೆಂಟರ್ ಕಾಶಿಪಟ್ಣ ಮೂಡುಬಿದರೆ ಇದರ ಯುಎಇ ಕಲ್ಚರಲ್ ಸೆಂಟರ್ ಇದರ 4ನೇ ವಾರ್ಷಿಕ ಮಹಾ ಸಭೆ ದೇರಾ ಖಲೀಜ್ ಗ್ರಾಂಡ್ ಹೋಟೆಲ್ ನಲ್ಲಿ ಸಲೀಂ ಅಲ್ತಾಫ್ ಫರಂಗಿಪೇಟೆ ಅಧ್ಯಕ್ಷತೆಯಲ್ಲಿ ನೆರವೇರಿತು.

ಮುಖ್ಯ ಅತಿಥಿಗಳಾಗಿ ದಾರುನ್ನೂರ್ ಉಪದೇಶಕ ಸಮಿತಿಯ ಪ್ರಮುಖರಾದ ಸಯ್ಯದ್ ಅಸ್ಕರ್ ಅಲಿ ತಂಙಳ್,  ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ, ಆಶ್ರಫ್ ಖಾನ್ ಮಾಂತೂರ್, ಜಸಂಶುದ್ದೀನ್ ಕಲ್ಕಾರ್, ಎಡ್ವೋಕೇಟ್ ಇಬ್ರಾಹಿಂ ಖಲೀಲ್, ಅಶ್ರಫ್ ಬಾಳೆಹೊನ್ನೂರ್,  ಗೌರವಾಧ್ಯಕ್ಷ ಮಹಮ್ಮದ್ ಮುಸ್ತಾಕ್ ಕದ್ರಿ, ಧಾರ್ಮಿಕ ಸಲಹೆಗಾರ ಉಸ್ತಾದ್ ಅಬ್ದುಲ್ ಖಾದರ್ ಅಸ್ ಅದಿ ಮೊದಲಾದವರು ಉಪಸ್ಥಿತರಿದ್ದರು.

ಪ್ರಧಾನ ಕಾರ್ಯದರ್ಶಿ ಬದ್ರುದ್ದೀನ್ ಹೆಂತಾರ್ ಸ್ವಾಗತಿಸಿದರು. ಸಯ್ಯದ್ ಅಸ್ಕರ್ ಅಲಿ ತಂಙಳ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ವಾರ್ಷಿಕ ವರದಿಯನ್ನು ಕಾರ್ಯದರ್ಶಿ ಆಶ್ರಫ್ ಪರ್ಲಡ್ಕ ವಾಚಿಸಿದರು. ವಾರ್ಷಿಕ ಕಾರ್ಯಾಚಟುವಟಿಕೆಗಳ ವಿವರವನ್ನು ಕೋ ಆಡಿಟರ್ ನಾಸಿರ್ ಬಪ್ಪಳಿಗೆ ನೀಡಿದರು. ವಾರ್ಷಿಕ ವರದಿ ಮತ್ತು ಕಾರ್ಯಾಚಟುವಟಿಕೆಗಳ ಅವಲೋಕನವನ್ನು ಅಧ್ಯಕ್ಷ ಸಲೀಂ ಅಲ್ತಾಫ್ ವಿವರಿಸಿದರು.

ಅಶ್ರಫ್ ಬಾಳೆಹೊನ್ನೂರ್, ಹಾಜಿ ಮುಹಿದ್ದೀನ್ ಕುಟ್ಟಿ ಕಕ್ಕಿಂಜೆ, ಎಡ್ವೋಕೇಟ್ ಇಬ್ರಾಹಿಂ ಖಲೀಲ್ , ಅಶ್ರಫ್ ಷಾ  ಮಾಂತೂರ್, ಮಹಮ್ಮದ್ ಮುಸ್ತಾಕ್ ಕದ್ರಿ,  ಸಂಶುದ್ದೀನ್ ಕಲ್ಕಾರ್ ಮೊದಲಾದವರು  ಸಲಹೆ ನೀಡಿದರು.

ದಾರುನ್ನೂರ್ ಯುಎಇ ಅಡ್ಮಿನ್ ಸೆಕ್ರೇಟರಿ ಸಮೀರ್ ಇಬ್ರಾಹಿಂ ಕಲ್ಲರೆ ಚುನಾವಣಾಧಿಕಾರಿಯಾಗಿ ನೂತನ ಸಮಿತಿ ರಚನೆಯ ಜವಾಬ್ಧಾರಿ ವಹಿಸಿಕೊಂಡರು. 2019ರ ಸಾಲಿಗೆ ದಾರುನ್ನೂರ್ ಯು ಎ ಇ ಕಲ್ಚರಲ್ ಸೆಂಟರ್ ಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಮುಖ್ಯ ಪೋಷಕರಾಗಿ ಕೆ ಯಸ್ ನಿಸಾರ್ ಅಹ್ಮದ್ ಕಾರ್ಕಳ, ಪೋಷಕರುಗಳಾಗಿ ಅಬ್ದುಲ್ಲಾ ಹಾಜಿ ಮದುಮೂಲೆ, ಮಹಮ್ಮದ್ ಮತೀನ್ ಚಿಂಲಿ ಮಂಗಳೂರು , ಬಶೀರ್ ಬಂಟ್ವಾಳ್, ಮುಖ್ಯ ಸಲಹೆಗಾರರಾಗಿ ಸಲೀಂ ಅಲ್ತಾಫ್ ಫರಂಗಿಪೇಟೆ, ಸಲಹೆಗಾರರಾಗಿ ಸಯ್ಯದ್ ಆಸ್ಕರ್ ಅಲಿ ತಂಙಳ್ ,  ಮುಹಿದ್ದೀನ್ ಕುಟ್ಟಿ ಹಾಜಿ ಕಕ್ಕಿಂಜೆ, ಸಂಶುದ್ದೀನ್ ವಳಪಟ್ಟಣಂ, ಶೌಕತ್ ಅಲಿ ಹುದವಿ, ಮುಹ್ಸಿನ್ ಅಹ್ಮದ್ ಮೂಡುಬಿದಿರೆ, ಸಂಶುದ್ದೀನ್ ಕಲ್ಕಾರ್, ಅಶ್ರಫ್ ಷಾ ಮಾಂತೂರ್, ಇಕ್ಬಾಲ್ ಬಾವ ಬಂಟ್ವಾಳ್, ಅಡ್ವೋಕೇಟ್ ಇಬ್ರಾಹಿಂ ಖಲೀಲ್, ಸಿದ್ದೀಕ್ ಉಚ್ಚಿಲ್, ಜಬ್ಬಾರ್ ಎಡನೀರ್, ಗೌರವಾಧ್ಯಕ್ಷರಾಗಿ ಮಹಮ್ಮದ್ ಮುಸ್ತಾಕ್ ಕದ್ರಿ, ಅಧ್ಯಕ್ಷರಾಗಿ ಸಂಶುದ್ದೀನ್ ಸೂರಲ್ಪಾಡಿ, ಉಪಾಧ್ಯಕ್ಷರಾಗಿ  ಮಹಮ್ಮದ್ ರಫೀಕ್ ಆತೂರು, ರವೂಫ್ ಹಾಜಿ ಕೈಕಂಬ ,  ಅಶ್ರಫ್ ಬಾಳೆಹೊನ್ನೂರ್ , ಪ್ರಧಾನ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಹೆಂತಾರ್, ಕಾರ್ಯದರ್ಶಿಗಳಾಗಿ ಮಹಮ್ಮದ್ ರಫೀಕ್ ಸುರತ್ಕಲ್, ಅಶ್ರಫ್ ಪರ್ಲಡ್ಕ, ಸಿರಾಜ್ ಬಿ.ಸಿ ರೋಡ್, ಕೋಶಾಧಿಕಾರಿಯಾಗಿ ಅಬ್ದುಲ್ ಸಲಾಂ ಬಪ್ಪಳಿಗೆ, ಸಹ ಕೋಶಾಧಿಕಾರಿಯಾಗಿ ಅಬ್ದುಲ್ ನಸೀರ್ ಸುರತ್ಕಲ್, ಸಂಘಟನೆ ಕಾರ್ಯದರ್ಶಿಯಾಗಿ ನವಾಝ್ ಬಿ.ಸಿ ರೋಡ್, ಅಡ್ಮಿನ್ ಸೆಕ್ರೆಟರಿಯಾಗಿ ಸಮೀರ್ ಇಬ್ರಾಹಿಂ ಕಲ್ಲರೆ, ಮೀಡಿಯಾ ಕೋರ್ಡೀನೇಟರಾಗಿ ಸಫಾ ಇಸ್ಮಾಯಿಲ್ ಬಜ್ಪೆ,  ಇಲ್ಯಾಸ್ ಕಡಬ, ಲೆಕ್ಕ ಪರಿಶೋಧಕರಾಗಿ ಅನ್ಸಾಫ್ ಪಾತೂರ್, ಸಹ ಲೆಕ್ಕ ಪರಿಶೋಧಕರಾಗಿ ನಾಸಿರ್ ಬಪ್ಪಳಿಗೆ, ಕೋರ್ಡೀನೇಟರಾಗಿ ಸಾಜಿದ್ ಬಜ್ಪೆ, ಧಾರ್ಮಿಕ ಸಲಹೆಗಾರರಾಗಿ ಉಸ್ತಾದ್ ಷರೀಫ್ ಅಶ್ರಫಿ ಮೊಡಂತ್ಯಾರ್, ಉಸ್ತಾದ್ ಸುಲೈಮಾನ್ ಮೌಲವಿ ಕಲ್ಲೆಗ, ಉಸ್ತಾದ್ ಅಬ್ದುಲ್ ರಝಾಕ್ ಪಾತೂರ್, ವನಿತಾ ಸಲಹಾ ಸಮಿತಿ ಕೋರ್ಡೀನೇಟರ್ ಸಮೀರ್ ಇಬ್ರಾಹಿಂ ಕಲ್ಲರೆ, ಕನ್ವೀನರ್ ಗಳಾಗಿ ಉಸ್ಮಾನ್ ಕೆಮ್ಮಿಂಜೆ, ಸುಹೈಲ್ ಚೊಕ್ಕಬೆಟ್ಟು, ಉಸ್ಮಾನ್ ಮರೀಲ್ ಪುತ್ತೂರು, ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ ನೂರ್ ಮಹಮ್ಮದ್ ನೀರ್ಕಜೆ, ಶರೀಫ್ ಕಾವು, ಬಶೀರ್ ಕೆಮ್ಮಿಂಜೆ, ಹನೀಫ್ ಕೆ.ಪಿ ಮೂಡಬಿದ್ರಿ, ನವಾಝ್ ಮನಲ್ , ಇಫ್ತಿಕಾರ್ ಅಡ್ಯಾರ್ ಕಣ್ಣೂರ್, ಅಬ್ದುಲ್ ರಹ್ಮಾನ್ ಬಾಳಿಯೂರ್, ಶಬೀರ್ ಫರಂಗಿಪೇಟೆ , ನವಾಝ್ ಕಕ್ಕಿಂಜೆ, ಅಶ್ರಫ್ ಬಾಂಬಿಲ, ಅಬ್ದುಲ್ ಖಾದರ್ ಕಾರ್ಕಳ, ಜಲೀಲ್ ಗುರುಪುರ , ಅಬ್ಬಾಸ್ ಕೇಕುಡೆ, ಸುಲೈಮಾನ್ ಗಡಿಯಾರ್ , ಯೂಸುಫ್ ಈಶ್ವರಮಂಗಲ, ಸಾಹುಲ್ ಬಿ.ಸಿ ರೋಡ್, ಅಬ್ದುಲ್ ರಝಾಕ್ ಸೊಂಪಾಡಿ, ಇಸ್ಮಾಯಿಲ್ ಮುಂಧೀರ್ ತೋಡಾರ್, ಶರೀಫ್ ಕೊಡ್ನೀರ್, ಅಶ್ರಫ್ ಪಾವೂರ್ , ಸಂಶುದ್ದೀನ್ ಹಮೀದ್ ಮೂಡಬಿದ್ರಿ, ಅಬ್ದುಲ್ ರಝಾಕ್  ಕರೈ, ಅಶ್ರಫ್ ಕೆಮ್ಮಿಂಜೆ ,  ಅಬೂಬಕ್ಕರ್ ಸಿದ್ದೀಕ್ ಮೂಡಬಿದ್ರಿ, ರವೂಫ್ ಕನ್ನಂಗಾರ್ , ಮುನೀರ್ ಕಾಂಞಂಗಾಡ್, ಝುಬೈರ್ ತೋಡಾರ್, ಅಬ್ದುಲ್ ರಹ್ಮಾನ್ ಸಜಿಪ, ಮುಸ್ರಿಫ್ ತೋಡಾರ್, ಫೈಝಲ್ ಸೀತಾಂಗೋಳಿ.  ಮೊದಲಾದವರನ್ನು ಆಯ್ಕೆ ಮಾಡಲಾಯಿತು.

ಅಬ್ದುಲ್ ರಝಾಕ್ ಕರೈ ವಂದಿಸಿ, ಕಾರ್ಯಕ್ರಮ ನಿರೂಪಿಸಿದರು.                    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News