ಶಬರಿಮಲೆ ಅಯ್ಯಪ್ಪಸ್ವಾಮಿ ದರ್ಶನ ಪಡೆದರೂ ಇನ್ನೂ ಮನೆಗೆ ವಾಪಸಾಗದ ಕೇರಳದ ಬಿಂದು, ಕನಕದುರ್ಗಾ

Update: 2019-01-11 07:08 GMT
ಕನಕದುರ್ಗಾ  ಮತ್ತು  ಬಿಂದು ಅಮ್ಮಿನಿ

ಕೊಚ್ಚಿ, ಜ.11: ಶಬರಿಮಲೆಯ ಶ್ರೀಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೂ ಪ್ರವೇಶ ಕಲ್ಪಿಸಿ ತೀರ್ಪು ನೀಡಿದ ಬಳಿಕ ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ ದರ್ಶನ ಪಡೆದ  ಕೇರಳದ ಮಹಿಳೆಯರಾದ ಬಿಂದು ಅಮ್ಮಿನಿ ಮತ್ತು ಕನಕದುರ್ಗಾ ಇನ್ನೂ ಮನೆಗೆ ವಾಪಸಾಗಿಲ್ಲ.

ಕಾನೂನು ಕಾಲೇಜಿನಲ್ಲಿ ಉಪನಸ್ಯಾಸಕಿಯಾಗಿರುವ 42ರ ಹರೆಯದ ಬಿಂದು ಕೋಝಿಕ್ಕೋಡ್  ನಿವಾಸಿ. ಕನಕದುರ್ಗಾ ಮಲಪ್ಪುರಂ ನಿವಾಸಿ. ಇವರು ಜನವರಿ 2ರಂದು ಶ್ರೀ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಿದ್ದರು. ಇದರ ಬೆನ್ನಲ್ಲೇ ಕೇರಳದಲ್ಲಿ ಹಿಂಸಾಚಾರ ಕಾಣಿಸಿಕೊಂಡಿತ್ತು.  ಆದರೆ ಬಿಂದು ಮತ್ತು ಕನಕದುರ್ಗಾ ಮನೆಗೆ ಮರಳದೆ ಇನ್ನೂ ಎಲ್ಲೊ ಅಡಗಿಕೊಂಡಿದ್ದಾರೆ. ಅವರಿಗೆ ಪ್ರತಿಭಟನೆಕಾರರಿಂದ ಜೀವಬೆದರಿಕೆ ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News